ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಸೆಸ್ಕ್ ಪಿರಿಯಾಪಟ್ಟಣ ಉಪ ವಿಭಾಗ ವ್ಯಾಪ್ತಿಯ ಜನ ಸಂಪರ್ಕ ಸಭೆ ಜೂ.6 ರಂದು ನಡೆಯಲಿದೆ ಎಂದು ಸೆಸ್ಕ್ ಪಿರಿಯಾಪಟ್ಟಣ ಉಪ ವಿಭಾಗ ಎಇಇ ಗುರುಬಸವರಾಜ ಸ್ವಾಮಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಕಚೇರಿ ಆವರಣದಲ್ಲಿ ಮೈಸೂರಿನ ಜಾಗೃತ ದಳ ಅಧಿಕಾರಿಗಳ ಸಮ್ಮುಖ ಜನ ಸಂಪರ್ಕ ಸಭೆ ನಡೆಯಲಿದ್ದು ಸಾರ್ವಜನಿಕರು ಕುಂದು ಕೊರತೆಗಳ ಮಾಹಿತಿ ನೀಡಬಹುದಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ ಸಾರ್ವಜನಿಕರು ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.