Sunday, June 8, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರ: ಶ್ರೀ ವಿಧು ಶೇಖರ ಭಾರತಿ ಮಹಾ ಸ್ವಾಮಿ ಅವರಿಗೆ ಭವ್ಯ ಸ್ವಾಗತ

ಚಾಮರಾಜನಗರ: ಶ್ರೀ ವಿಧು ಶೇಖರ ಭಾರತಿ ಮಹಾ ಸ್ವಾಮಿ ಅವರಿಗೆ ಭವ್ಯ ಸ್ವಾಗತ

ಚಾಮರಾಜನಗರ: ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧು ಶೇಖರ ಭಾರತಿ ಮಹಾ ಸ್ವಾಮಿಗಳವರು ಚಾಮರಾಜನಗರ ಜಿಲ್ಲೆಗೆ ಪ್ರವೇಶಿಸಿದಾಗ ಭವ್ಯ ಸ್ವಾಗತವನ್ನು ಕೋರಿ ಆಶೀರ್ವಾದ ಪಡೆಯಲಾಯಿತು.

ಚಾಮರಾಜನಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ. ಕಮರವಾಡಿ ಶ್ರೀ ಸಪ್ತಮಾತ್ರಕ ದೇವಸ್ಥಾನಕ್ಕೇ ಆಗಮಿಸಿ ಸಪ್ತ ಮಾತೃಕೆ ಪೂಜಾ ಕಾರ್ಯಕ್ರಮ ಹಾಗೂ ಭಕ್ತರಿಗೆ ಆಶೀರ್ವಚನ ನೀಡಿದರು.

ಚಾಮರಾಜನಗರ ಜಿಲ್ಲಾ ಕೆಂದ್ರಕ್ಕೆ ಆಗಮಿಸಿದಾಗ ಗಡಿ ಭಾಗದಲ್ಲಿ ನೂರಾರು .ವಿಪ್ರ ಭಾಂದವರು ಜಿಲ್ಲಾ ಬ್ರಾಹ್ಮಣ ಸಂಘದ ನೇತೃತ್ವದಲ್ಲಿ  ವೇದ ಮಂತ್ರಘೋಷ, ನಾದಸ್ವರ ದೊಂದಿಗೆ ಪೂರ್ಣ ಕುಂಭ ಸ್ವಾಗತ ದೊಂದಿಗೆ ಭಕ್ತಿ ಪೂರ್ವಕ ಪ್ರಾಣಾಮಗಳನ್ನು ಸಲ್ಲಿಸಲಾಯಿತು. ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಿಎಂ ಹೆಗಡೆ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ, ಖಜಾಂಚಿ ಬಾಲಸುಬ್ರಹ್ಮಣ್ಯಂ.ಕೊಳ್ಳೇಗಾಲ ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಖರ್  ಶಾಸ್ತ್ರಿ, ಯಳಂದೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಮುರಳಿ,.ಬ್ರಾಹ್ಮಿ ಮಹಿಳಾ ಸಂಘದ ಅಧ್ಯಕ್ಷರು, ಶ್ರೀ ರಾಮಮಂದಿರ,ಸೇರಿದಂತೆ  ಸಂಘಟನೆಗಳ ಸದಸ್ಯರು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ಹೆಬ್ಬಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶಾರದಾಕೃಪ ಉದ್ಘಾಟನೆ.ಯನ್ನು ಶ್ರೀ ಶ್ರೀ ವಿಧು ಶೇಖರ ಭಾರತಿ ಸ್ವಾಮಿಗಳು ನೆರವೇರಿಸಿದರು. ಜಗದ್ಗುರುಗಳನ್ನು ಶೃಂಗೇರಿ ಶಂಕರ ಮಠದ ಶಾಖಾಮಠದ  ಧರ್ಮಾಧಿಕಾರಿ ಶ್ರೀಧರ್ ಪ್ರಸಾದ್, ತಾ  ಬ್ರಾಹ್ಮಣದ ಸಂಘದ ಅಧ್ಯಕ್ಷ ನಾಗರಾಜು  ಸೇರಿದಂತೆ ನೂರಾರು ಭಕ್ತರು ಬರಮಾಡಿಕೊಂಡರು. ಅಗ್ರಹಾರದ ಸುತ್ತಲೂ ಭವ್ಯ ವೇದಿಕೆ, ಚಪ್ಪರಹಾಸು ,ವೇದಘೋಷ, ಸ್ತೋತ್ರ ಪಠಣಗಳ ಮೂಲಕ ಪ್ರತಿ ಮನೆ ಮನೆಯಲ್ಲೂ ಆರತಿ ಎತ್ತುವ ಮೂಲಕ ಭಕ್ತಿ ಪೂರ್ವಕವಾಗಿ ಪರಮಾಡಿಕೊಳ್ಳಲಾಯಿತು.

ನಂತರ ಶ್ರೀ ಶ್ರೀಗಳವರು ಚಂದ್ರಮೌಳೇಶ್ವರ ಪೂಜೆಯನ್ನು ನೆರವೇರಿಸಿದರು. ಇಂದು ಸಂಜೆ 5:30ಕ್ಕೆ ಶ್ರೀ ಶ್ರೀಗಳವರ ಅನುಗ್ರಹ ಭಾಷಣ ನಡೆಯಲಿದೆ.

RELATED ARTICLES
- Advertisment -
Google search engine

Most Popular