Wednesday, June 4, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರ: ಬಂಡೀಪುರದಲ್ಲಿ ಅತಿಕ್ರಮ ಪ್ರವೇಶ: ಇಬ್ಬರಿಗೆ ₹25,000 ದಂಡ

ಚಾಮರಾಜನಗರ: ಬಂಡೀಪುರದಲ್ಲಿ ಅತಿಕ್ರಮ ಪ್ರವೇಶ: ಇಬ್ಬರಿಗೆ ₹25,000 ದಂಡ

ಚಾಮರಾಜನಗರ: ಬಂಡೀಪುರ ಅಭಯಾರಣ್ಯಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಫೋಟೋ ಶೂಟ್ ನಡೆಸಿದ ಬೆಂಗಳೂರು ಮೂಲದ ಪಲ್ಲವಿ ಮತ್ತು ಘೋಷ್ ಎಂಬುವವರಿಗೆ ಅರಣ್ಯ ಇಲಾಖೆ ₹25,000 ದಂಡ ವಿಧಿಸಿದೆ.

ಮಂಗಲ ರಸ್ತೆ ಸಮೀಪ ಫೋಟೋ ಶೂಟ್ ನಡೆಸುತ್ತಿದ್ದಾಗ ಪ್ರವಾಸಿಗರು ವಿಡಿಯೋ ಮಾಡಿ ಎ.ಸಿ.ಎಫ್. ನವೀನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು.

ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಪಲ್ಲವಿ ಮತ್ತು ಘೋಷ್ ಅವರನ್ನು ಕರೆಸಿ ಮುಚ್ಚಳಿಕೆ ಪತ್ರ ಬರೆಸಿ 25 ಸಾವಿರ ರೂ. ದಂಡ ವಿಧಿಸಿದ್ದಾರೆ.

RELATED ARTICLES
- Advertisment -
Google search engine

Most Popular