ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇತ್ತೀಚಿಗೆ ಒಕ್ಕಲಿಗರ ಮೇಲೆ ಹೆಚ್ಚು ಪ್ರೀತಿ ಬಂದಿದೆ. ಆದರೆ ಒಕ್ಕಲಿಗರ ಜಾತಿ ಕಾರ್ಡ್ ವರ್ಕ್ ಲೋಕಸಭಾ ಚುನಾವಣೆಯಲ್ಲಿ ವರ್ಕ್ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಅವರು ಪಟ್ಟಣದ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಅವರ ನಿವಾಸಕ್ಕೆ ಬೇಟಿ ನೀಡಿ ಮಾತನಾಡಿದರು.
ಮೈಸೂರು ಲೋಕಸಭಾ ಕ್ಷೇತ್ರದ ಟಿಕೇಟ್ ನ್ನು ೪೭ ವರ್ಷದಿಂದ ಒಕ್ಕಲಿಗರಿಗೆ ಕೊಡಬೇಡಿ ಅಂತ ಹೇಳಿದ್ವ, ಮೈಸೂರು ಮಹಾರಾಜರಾದ ಯಧುವೀರ್ ಒಡೆಯರ್ ಅವರು ಜೆಡಿಎಸ್ , ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದಾರೆ, ಆದ್ದರಿಂದಲೇ ಸಿದ್ದರಾಮಯ್ಯನವರಿಗೆ ಇವಾಗ ಜಾತಿ ಲೆಕ್ಕ ಮಾಡುತ್ತಿರುವುದು ನಮಗೆ ಜ್ಯಾತ್ಯಾತೀತ ತೆಗಿರಿ ಎನ್ನುವ ಸಿದ್ದರಾಮಯ್ಯನವರು ಒಕ್ಕಲಿಗರನ್ನು ಅಭ್ಯರ್ಥಿ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.
ನಿಮ್ಮ ಕುಟುಂಬದ ಮೂವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲ್ಲ ಸೋಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ ಎಂದು ಮಾದ್ಯಮವರ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿ.ಕುಮಾರಸ್ವಾಮಿ ಅವರು ಇವರೆಲ್ಲ ಜಾತಿ ಹೆಸರನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಆದರೆ ನಿತ್ಯ ಹಲವಾರು ಮಂತ್ರಿಗಳು, ಶಾಸಕರ ಹೇಳಿಕೆಗಳನ್ನು ನೋಡಿದ್ರೆ ಈ ಸರ್ಕಾರ ಬಹಳ ದಿನ ಇರಲ್ಲ.
ಸರ್ಕಾರದ ಆಯಸ್ಸು ಬಹಳ ದಿನ ಇಲ್ಲ ಲೋಕಸಭಾ ಚುನಾವಣೆ ಕಳೆದ ಮೇಲೆ ಏನೇನು ಕೂಡ ಆಗಬಹುದು ಎಂದು ಭವಿಷ್ಯ ನುಡಿದರು.
ದೇವೆಗೌಡರ ಬಗ್ಗೆ ಸಚಿವ ರಾಜಣ್ಣ ಹಾಸನದಲ್ಲಿ ಈ ವಯಸ್ಸಿನಲ್ಲಿ ರಾಜಕಾರಣ ಬೇಕಾ ಎಂದು ಹೇಳಿದ್ದಾರೆ ಎಂಬ ಪ್ರಶ್ನೆಗೆ. ಸಚಿವ ರಾಜಣ್ಣ ಕುಟುಂಬ ಈಗ ಏನಾಗಿದೆ.ಮಗ ಏನ್ ಕೆಲಸ ಮಾಡಿದ್ದಾನೆ ಸಹಕಾರ ಇಲಾಖೆಯನ್ನೇ ಗುಡುಸಿದ್ದಾನೆ ಇದಕ್ಕಿಂತ ಬೇಕಾ, ಅಂತ ಮಗನನ್ನು ಎಂಎಲ್ ಸಿ ಮಾಡಿದ್ದಾರೆ. ರಾಜಣ್ಣ ವಿಧಾನಸೌಧದ ಮೆಟ್ಟಿಲತ್ತಿದ್ದೆ ದೇವೇಗೌಡರಿಂದ ಎಂದರಲ್ಲದೆ ದೇವೇಗೌಡರ ಪ್ರಚಾರದಿಂದಲೇ ರಾಜಣ್ಣ ಗೆದ್ದಿದ್ದು ರಾಜಣ್ಣ ವಿರುದ್ದ ವಾಗ್ದಾಳಿ ನಡೆಸಿದರು.ರಾಜಣ್ಣರಿಂದ ಸಲಹೆ ಪಡೆಯುವ ದಯಾನೀಯ ಪರಿಸ್ಥಿತಿ ನಮಗೆ ಬಂದಿಲ್ಲ. ಅವರ ಬಂದಿರುವ ಸಂಸ್ಕೃತಿ ಅಂತಹದ್ದು. ಅವರು ಯಾರನ್ನು ಒಲೈಸಿಕೊಳ್ಳುಲು ಹೇಳಿಕೆ ಕೊಡುತ್ತಿದ್ದಾರೆ ಗೊತ್ತಿಲ್ಲ. ಆದ್ರೆ ಇದನ್ನೆಲ್ಲ ಗಮನಿಸಿದ್ರೆ ಒಲೈಕೆ ಇರಬಹುದು ಆದರೆ ಇವರ ಆಟ ಹೆಚ್ಚು ದಿನ ನಡೆಯಲ್ಲ ಎಂದಹ ಗುಡುಗಿದರು.
ರಾಜಕೀಯ ನಿವೃತ್ತಿ ಇಲ್ಲ : ಭವಿಷ್ಯದಲ್ಲಿ ದೇವೇಗೌಡರಿಗೆ ಭೂಮಿಗೆ ಹೋಗುವವರೆಗೆ ರಾಜಕೀಯ ನಿವೃತ್ತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಪತನದ ನಂತರ ದೂರವಾಗಿದ್ದ ನಾಯಕರು.ಇದೀಗಾ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಒಂದಾಗುತ್ತಿರುವುದು ಕೂ ಪಾಳ್ಯದಲ್ಲಿ ತಳಮಳ ಉಂಟಾಗಿದ್ದು, ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್. ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬೆಳಗ್ಗೆನೇ ಹಳ್ಳಿ ಹಕ್ಕಿ, ನೇರಾನುಡಿ ಹೇಳಿಕೆ ನೀಡುವ ವಿಧಾನ ಪರಿಷತ್ ಸದಸ್ಯ ಅವರನ್ನು ಬೇಟಿ ಮಾಡಿ ಬೆಂಬಲ ಪಡೆಯಲು ಬಂದಿದ್ದೇನೆ, ಅವರು ಕೂಡ ನಾನು ಮೈತ್ರಿ ಪಕ್ಣದ ಅಭ್ಯರ್ಥಿ ಎಂದು ಗೋತ್ತಾದ ಕೂಡಲೇ ಪೋನ್ ಕರೆ ಮಾಡಿ ಬೆಂಬಲ ವ್ಯಕ್ತ ಪಡಿಸಿದರು. ಕೆ.ಆರ್.ನಗರ, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ವ್ಯಾಪ್ತಿಗೆ ಸೇರುವ ಕ್ಷೇತ್ರ. ಆ ಹಿನ್ನೆಲೆಯಲ್ಲಿ ನಮ್ಮೆಲ್ಲ ಮುನಿಸು ಮರೆತು ಅವರ ನಿವಾಸಕ್ಕೆ ಖುದ್ದು ಬಂದು ಬೆಂಬಲ ಕೋರಿದ್ದೇನೆ ಎಂದು ತಿಳಿಸಿದ ಹೆಚ್.ಡಿ.ಕೆ. ಹಳ್ಳಿಹಕ್ಕಿ, ನೇರಾನುಡಿಗೆ ಪಾತ್ರರಾಗಿರುವ ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್ ಮಾತನಾಡಿ.ನಮ್ಮೂರಿಗೆ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಬಂದಿದ್ದಾರೆ. ಇದು ವಿಶೇಷ ಸಂದರ್ಭ. ನನ್ನ ರಾಜಕೀಯ ಜೀವನದಲ್ಲಿ ಅಪರೂಪದ ಸಂದರ್ಭ. ರಾಜಕಾರಣದಲ್ಲಿ ಮಾತು, ಸಂಘರ್ಷ ಸಹಜ. ಅದನ್ನು ಸರಿ ಮಾಡಿಕೊಂಡು ಹೋಗೋದು ಅನಿವಾರ್ಯ ಎಂದು ತಿಳಿಸಿದರು.
ಈ ನೆಲದಿಂದ ಎದ್ದು ಭಾರತದ ಪ್ರಧಾನಿ ಆಗೋದು ಸುಲಭ ಸಾಧನೆ ಅಲ್ಲ ಎಂದು ಮಾಜಿ ಪ್ರಧಾನಿ ಹೆಚ್ಡಿ.ದೇವೇಗೌಡರನ್ನು ಸ್ಮರಿಸಿದ ವಿಶ್ವನಾಥ್ ಅವರು ಕಷ್ಟದ ಸಂದರ್ಭದಲ್ಲಿ ನನ್ನ ಜತೆಗಿದ್ದಾರೆ. ಎಂದು ಹೇಳಿದರು. ಇನ್ನೂ ಮಾಚಿ ಸಚಿವ ಸಾ.ರಾ.ಮಹೇಶ್ ನನಗೂ ಬಹಳಷ್ಟು ಭಿನ್ನಾಭಿಪ್ರಾಯ ಇತ್ತು. ನಮ್ಮೀಬ್ಬರ ಭಿನ್ನಾಭಿಪ್ರಾಯ ಚಾಮುಂಡಿಬೆಟ್ಟದವರೆಗೂ ಹೋಗಿತ್ತು. ಮತ್ತೆ ಒಂದಾಗಿದ್ದೇವೆ ಎಂದು ಹೇಳಿದ್ದರಲ್ಲದೆ ರಾಜಕೀಯ ಧ್ರುವೀಕರಣದ ಸಂದರ್ಭದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದೇ ಸವಾಲು. ಬಿಜೆಪಿ- ಜೆಡಿಎಸ್ ಒಂದಕ್ಕೊಂದು ಮಿಳಿತವಾಗಿ ಮೋದಿ ಪ್ರಧಾನಿ ಮಾಡಲು ಸಜ್ಜಾಗಿವೆ. ನಾನು ವಿಷಯಾಧಾರಿತವಾಗಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ಗೆ ಬೆಂಬಲ ನೀಡಿದ್ದೇನೆ. ಅದೆಲ್ಲವನ್ನೂ ಮರೆತು ಕುಮಾರಸ್ವಾಮಿ ಮನೆಗೆ ಬಂದಿರುವುದು ಖುಷಿ ನೀಡಿದೆ. ರಾಜವಂಶದ ಕುಡಿ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಯಾಗಲು ಯದುವೀರ್ ಸ್ಪರ್ಧೆ ಮಾಡಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಇಬ್ಬರೂ ಗೆಲ್ಲಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಮಾತು ಮಾತಿಗೆ ಕುಟುಂಬ ರಾಜಕಾರಣ ಅಂತಾರೆ ದೇವೇಗೌಡರನ್ನ ಆದರೆ ನಿಮ್ಮ ಕಾಂಗ್ರೆಸ್ನಲ್ಲಿ ೧೩ ಜನ ಮಕ್ಕಳು ಕುಟುಂಬದವರು, ೭ ಜನ ಮಂತ್ರಿಗಳು ಮಕ್ಕಳು ಅಭ್ಯರ್ಥಿ ಆಗಿದ್ದಾರೆ ಇದು ಕುಟುಂಬ ರಾಜಕಾರಣ ಅಲ್ವ ಸಿದ್ದರಾಮಯ್ಯನವರೇ ಎಂದು ಪ್ರಶ್ನೆ ಮಾಡಿದ ಹಳ್ಳಿ ಹಕ್ಕಿ ವಿಶ್ವನಾಥ್ ಕುಮಾರಸ್ವಾಮಿ ಅವರ ಬಗ್ಗೆ ಆಡಳಿತಾತ್ಮಕವಾಗಿ ಟೀಕೆ ಮಾಡಿ. ಆದ್ರೆ ಎಚ್.ಡಿ.ದೇವೇಗೌಡರ ಬಗ್ಗೆ ಯಾವುದೇ ಕಾರಣಕ್ಕೂ ಹಗುರದ ಮಾತುಗಳನ್ನು ಆಡ ಬಾರದು. ಅಂತಹ ನೈತಿಕತೆ ಯಾರಿಗೂ ಇಲ್ಲ ಎಂದು ಸಿದ್ದರಾಮಯ್ಯನವರ ದುರಂಹಕಾರದ ಮಾತುಗಳು ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರೇ, ಮೈಸೂರಲ್ಲಿ ನಿಮ್ಮ ಮಗನನ್ನು ನಿಲ್ಲಿಸಬೇಕು ಅಂದುಕೊಂಡಿದ್ರಿ. ನನ್ನ ಹೆಸರೂ ಇತ್ತು. ಸರ್ವೇ ರಿಪೋರ್ಟ್ ಬಂದ ಮೇಲೆ ಪಾಪ ಲಕ್ಷ್ಮಣ್ ಒಕ್ಕಲಿಗ ಎಂಬ ಕಾರಣಕ್ಕೆ ನಿಲ್ಲಿಸಿಕೊಂಡಿದ್ದೀರಿ. ಇವತ್ತು ಒಕ್ಕಲಿಗರ ಜಾತಿ ಬಳಕೆ ಮಾಡಿ ಕೊಳ್ಳುತ್ತಿದ್ದಿರಿ ಇದು ನೀವು ಒಕ್ಕಲಿಗರಿಗೆ ಮಾಡಿದ ಅಪಮಾನ ಎಂದರಲ್ಲದೆ ಮತ್ತೊಮ್ಮೆ ಮಾತನಾಡಿ ಮೈಸೂರಲ್ಲಿ ಯದುವೀರ್, ಮಂಡ್ಯದಿಂದ ಕುಮಾರಸ್ವಾಮಿ ಗೆಲ್ಲಬೇಕು ಎಂದು ನೆರದಿದ್ದ ಎಲ್ಲಿರಿಗೂ ಹಾಗೂ ಕ್ಷೇತ್ರದ ಜನರಿಗೆ ಮನವಿ ಮಾಡಿದರು.
ನಾಲ್ಕೂವರೆ ವರ್ಷದ ಬಳಿಕ “ವಿಶ್ವಣ್ಣ” ಎಂದ ಎಚ್ಡಿಕೆ.,ವಮೊದಲ ಮುಖಾಮುಖಿಯಲ್ಲೇ ಆತ್ಮೀಯ ಮಾತುಕತೆ. ಪರಸ್ಪರ ಹಾಡಿ ಹೊಗಳಿದ ವಿಶ್ವನಾಥ್, ಎಚ್.ಡಿ.ಕುಮಾರಸ್ವಾಮಿ. ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ. ವಿಶ್ವಣ್ಣ ಅದೆಲ್ಲವನ್ನೂ ಮರೆತು ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದಂತೆ ಕರೆ ಮಾಡಿ ಶುಭ ಕೋರಿದ್ರು. ದೂರವಾಣಿ ಮೂಲಕವೇ ನನ್ನ ಬೆಂಬಲ ನಿಮಗಿದೆ ಅಂತ ತಿಳಿಸಿದ್ರು. ಅವರ ಅಭಿಮಾನಕ್ಕೆ ಸೋತು ಮನೆಗೆ ಬಂದಿದ್ದೇನೆ. ವಿಶ್ವನಾಥ್ ನೇರ, ನಿಷ್ಠೂರವಾಗಿ ಮಾತನಾಡುವ ರಾಜಕಾರಣಿ.
ಆದರೆ ಪ್ರಾಮಾಣಿಕವಾಗಿ ಇದ್ದಾರೆ. ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಎಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.

ಎಸ್.ನಂಜಪ್ಪ ಮನೆಗೆ ಭೇಟಿ: ಎಚ್.ವಿಶ್ವನಾಥ್ ಮನೆಗೆ ಬೇಟಿ ನೀಡಿದ ಬಳಿಕ ಮಾಜಿ ಸಚಿವ ದಿ.ಎಸ್.ನಂಜಪ್ಪ ಅವರ ಮನೆಗೆ ಬೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಂಜಪ್ಪ ಅವರ ಪತ್ನಿ ಲಲಿತಮ್ಮ ಅವರ ಸಹಕಾರ ಕೋರಿದರು.
ಮನೆಗೆ ಬೇಟಿ ನೀಡಿದ ವೇಳೆ ಎಸ್ .ನಂಜಪ್ಪ ಅವರ ಪುತ್ರರಾದ ನಿವೃತ್ತ ತಂಬಾಕು ಮಂಡಳಿ ಅಧಿಕಾರಿ ಕೆ.ಎನ್.ದಿನೇಶ್ ಮತ್ತು ಕೆ.ಆರ್.ನಗರ ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್ .ಬಸಂತ್ ಕುಮಾರಸ್ವಾಮಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಜೆ.ಡಿ.ಎಸ್ ನಾಯಕರಾದ ಶಾಸಕ ಜಿ.ಟಿ.ದೇವೆಗೌಡ, ಮಾಜಿ ಸಚಿವರಾದ ಸಾ.ರಾ.ಮಹೇಶ್, ಪುಟ್ಟರಾಜು, ಬಂಡೆಪ್ಪ ಕಾಶಪ್ಪನವರ್, ವಿಧಾನ ಪರಿಷತ್ ಸದಸ್ಯ ಸಿಎನ್.ಮಂಜೇಗೌಡ, ಹಾಸನ ಬಿಜೆಪಿ ಮುಖಂಡ ಸಾರಥಿ, , ಜಿ.ಪಂ.ಮಾಜಿ ಉಪಾಧ್ಯಕ್ಷ ಅಡಗೂರು ಚೆನ್ನಬಸಪ್ಪ, ಹೆಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಕರ್ನಾಟಕ ವಸ್ತು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ರಾಜ್ಯಬಿಜೆಪಿ ಅಲ್ಪಸಂಖ್ಯಾತ ಮೊರ್ಜಾ ಕಾರ್ಯದರ್ಶಿ ಪ್ರಭಾಕರ್ ಜೈನ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ತಾಲ್ಲೂಕು ಜಾದಳ ವಕ್ತಾರ ಕೆ.ಎಲ್.ರಮೇಶ್, ತಾ.ಜಾದಳ ಅಧ್ಯಕ್ಷರಾದ ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ಜೆಡಿಎಸ್ ರಾಜ್ಯ ಪ್ರ.ಕಾರ್ಯದರ್ಶಿ ಚಂದ್ರಶೇಖರ, ಬಿಜೆಪಿ ಅಧ್ಯಕ್ಷರಾದ ಸಾ.ರಾ.ತಿಲಕ್, ಹೊಸೂರು ಧರ್ಮ, ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್ ಖಾನ್, ತಾ.ಬಿಜಿಪಿ ಅಧ್ಯಕ್ಷ ಹೊಸೂರು ಧರ್ಮ, ಜಿ.ಪಂ.ಮಾಜಿ ಸದಸ್ಯ ಎಂ.ಟಿ.ಕುಮಾರ್, ಪುರಸಭೆ ಸದಸ್ಯರಾದ ಉಮೇಶ್, ಸಂತೋಷಗೌಡ, ಕೆ.ಎಲ್.ಜಗದೀಶ್, ಪ್ರಭುಶಂಕರ್, ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗರೆ ಕುಚೇಲ, ಮುಖಂಡರಾದ ಹರದನಹಳ್ಳಿ ರಮೇಶ್, ಬಾಲಾಜಿಗಣೇಶ್, ಹಂಪಾಪುರ ಸೂರಿ, ಬೆಣಗನಹಳ್ಳಿ ಪ್ರಶನ್ನ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.