Thursday, April 2, 2026
Google search engine

Homeಸ್ಥಳೀಯಎತ್ತಿನಹೊಳೆ ಯೋಜನೆಗೆ ಕೇಂದ್ರದ ಷರತ್ತುಬದ್ಧ ಅನುಮತಿ : 277 ಎಕರೆ ಅರಣ್ಯ ಬಳಕೆಗೆ ತಾತ್ವಿಕ ಒಪ್ಪಿಗೆ

ಎತ್ತಿನಹೊಳೆ ಯೋಜನೆಗೆ ಕೇಂದ್ರದ ಷರತ್ತುಬದ್ಧ ಅನುಮತಿ : 277 ಎಕರೆ ಅರಣ್ಯ ಬಳಕೆಗೆ ತಾತ್ವಿಕ ಒಪ್ಪಿಗೆ

ನವದೆಹಲಿ : ಎತ್ತಿನಹೊಳೆ ಯೋಜನೆಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ 277 ಎಕರೆ ಅರಣ್ಯ ಬಳಸಲು ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಷರತ್ತುಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ತಾತ್ವಿಕ ಅನುಮೋದನೆ ನೀಡಿದೆ.

ಈ ಬಗ್ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಅರಣ್ಯ ಸಂರಕ್ಷಣಾ ವಿಭಾಗ) ಮಾಹಿತಿ ನೀಡಿದ್ದು, ಯೋಜನೆ ಮುಂದುವರಿಸಲು 34 ಷರತ್ತುಗಳನ್ನು ವಿಧಿಸಿದೆ. ಈ ಬೆಳವಣಿಗೆ ಬಳಿಕ ಸಚಿವಾಲಯದ ತಕರಾರಿನ ಕಾರಣದಿಂದ ವರ್ಷದಿಂದ ಸ್ಥಗಿತಗೊಂಡಿದ್ದ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಮತ್ತೆ ಚಾಲನೆ ಸಿಗಲಿದೆ. 

ಈಗಾಗಲೇ ಅರಣ್ಯ ಪ್ರದೇಶದಲ್ಲಿ ಒಪ್ಪಿಗೆ ಇಲ್ಲದೇ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುಬೇಕು. ಕಾಮಗಾರಿ ನಡೆಸಿದ ಸ್ಥಳದ ಮೌಲ್ಯದ ಆರು ಪಟ್ಟು ಮೌಲ್ಯವನ್ನು ದಂಡದ ರೂಪದಲ್ಲಿ ಪಾವತಿಸಬೇಕು. ಪರಿಸರ ಸಂರಕ್ಷಣೆ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಬೇಕು ಎಂದು ಕೇಂದ್ರ ಹೇಳಿದೆ.

ಅರಣ್ಯ ಭೂಮಿಯ ಪ್ರಮಾಣಕ್ಕೆ ಸಮನಾಗಿ ಅರಣ್ಯೇತರ ಭೂಮಿಯಲ್ಲಿ ಬೆಳೆಸಬೇಕು. ಪರಿಹಾರ ಅರಣ್ಯೀಕರಣಕ್ಕಾಗಿ ಗುರುತಿಸಲಾದ ಅರಣ್ಯೇತರ ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆಯ ಹೆಸರಿಗೆ ವರ್ಗಾವಣೆ ಮತ್ತು ಮ್ಯುಟೇಷನ್ ಮಾಡಬೇಕು, ಅದರ ವಿವರಗಳನ್ನು ಸಲ್ಲಿಸಬೇಕು.

ಅರಣ್ಯೇತರ ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆಯ ಹೆಸರಿಗೆ ವರ್ಗಾವಣೆ ಮತ್ತು ಮ್ಯುಟೇಷನ್ ಮಾಡಿದ ನಂತರ, ರಾಜ್ಯ ಸರ್ಕಾರವು ಅದನ್ನು ಭಾರತೀಯ ಅರಣ್ಯ ಕಾಯಿದೆ 1927ರ ಸೆಕ್ಷನ್ 29 ಅಡಿಯಲ್ಲಿ ಅಥವಾ ಸ್ಥಳೀಯ ಅರಣ್ಯ ಕಾಯಿದೆಯ ಅಡಿಯಲ್ಲಿ ಸಂರಕ್ಷಿತ ಅರಣ್ಯ ಎಂದು ಅಧಿಸೂಚಿಸಬೇಕು. ನಂತರವೇ ಅರಣ್ಯ ಭೂಮಿಯನ್ನು ಬಳಕೆದಾರ ಏಜೆನ್ಸಿಗೆ ಹಸ್ತಾಂತರಿಸಬೇಕು.

ಬಳಕೆದಾರ ಏಜೆನ್ಸಿ ಪರಿಹಾರ ಅರಣ್ಯೀಕರಣವನ್ನು ಬೆಳೆಸುವ ಮತ್ತು ನಿರ್ವಹಿಸುವ ವೆಚ್ಚವನ್ನು ಅರಣ್ಯೇತರ ಭೂಮಿಯ ಸಮಾನ ಪ್ರಮಾಣಕ್ಕೆ ಪ್ರಸ್ತುತ ದಿನಗೂಲಿ ದರದಲ್ಲಿ CAMPA ಖಾತೆಗೆ ಆನ್‌ಲೈನ್‌ನಲ್ಲಿ ಜಮಾ ಮಾಡಬೇಕು. ಈ ಯೋಜನೆಯಲ್ಲಿ CA ಪ್ರದೇಶದ ಗಡಿ ನಿರ್ಧಾರ, ಬೇಲಿ, ನೀರುಣಿಸುವ ವ್ಯವಸ್ಥೆ, SMC ಕೆಲಸಗಳು ಮತ್ತು ಮುಂದಿನ ವರ್ಷಗಳ ವೆಚ್ಚ ಏರಿಕೆಗೆ ಸೂಕ್ತ ಬದುಕುಳಿಕೆಯ ವೆಚ್ಚವನ್ನು ಸೇರಿಸಬೇಕು, ಇದನ್ನು 10 ವರ್ಷಗಳವರೆಗೆ ನಿರ್ವಹಿಸಬೇಕು.

ಮರಗಳನ್ನು ಕಡಿಯುವ ವೆಚ್ಚವನ್ನು ಬಳಕೆದಾರ ಏಜೆನ್ಸಿಯು ರಾಜ್ಯ ಅರಣ್ಯ ಇಲಾಖೆಗೆ ಜಮಾ ಮಾಡಬೇಕು. ಅರಣ್ಯ ಭೂಮಿಯಲ್ಲಿ ಯಾವುದೇ ಕಾರ್ಮಿಕ ಶಿಬಿರ ಸ್ಥಾಪಿಸುವಂತಿಲ್ಲ. ಯೋಜನೆಯ ಕಾಮಗಾರಿಗಾಗಿ ಅರಣ್ಯ ಪ್ರದೇಶದ ಒಳಗೆ ಹೊಸ ರಸ್ತೆ ಅಥವಾ ಹಾದಿಗಳನ್ನು ನಿರ್ಮಿಸುವಂತಿಲ್ಲ. ಅರಣ್ಯ ಭೂಮಿಯನ್ನು ಯೋಜನೆಯಲ್ಲಿ ತಿಳಿಸಲಾದ ಉದ್ದೇಶಕ್ಕೆ ಮಾತ್ರ ಬಳಸಬೇಕು. ಬೇರೆ ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. 

ಯೋಜನೆಗಾಗಿ ಬಳಸುವ ಒಟ್ಟು ಅರಣ್ಯ ಭೂಮಿಯ ಪ್ರಮಾಣ 111.0277 ಹೆಕ್ಟೇರ್ ಅನ್ನು ಮೀರಬಾರದು. ಅಕ್ಕಪಕ್ಕದ ಪ್ರದೇಶದ ಸಸ್ಯ ಮತ್ತು ಪ್ರಾಣಿ ಜೀವಿಗಳಿಗೆ ಯಾವುದೇ ಹಾನಿ ಉಂಟುಮಾಡುವಂತಿಲ್ಲ. ರಾಜ್ಯ ಸರ್ಕಾರವು ಅರಣ್ಯ ಅನುಮೋದನೆಯ ಷರತ್ತುಗಳ ಅನುಸರಣೆಯನ್ನು ಪ್ರತಿ ವರ್ಷ ಡಿಸೆಂಬರ್ 31ರಂದು ವರದಿ ಸಲ್ಲಿಸಬೇಕು.

ಮರಗಳನ್ನು ಕಡಿಯುವುದು ಅನಿವಾರ್ಯವಾಗಿದ್ದಲ್ಲಿ ಮಾತ್ರ ಮತ್ತು ರಾಜ್ಯ ಅರಣ್ಯ ಇಲಾಖೆಯ ಕಟ್ಟುನಿಟ್ಟು ಮೇಲ್ವಿಚಾರಣೆಯಲ್ಲಿ ಮಾತ್ರ ಮಾಡಬೇಕು. ಈ ಷರತ್ತುಗಳಲ್ಲಿ ಯಾವುದಾದರೂ ಒಂದು ಉಲ್ಲಂಘನೆಯಾದಲ್ಲಿ ಅದು ನಿಯಮ 1980 ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಮತ್ತು ಕಾಯಿದೆ ಪ್ರಕಾರ ಕ್ರಮ ತೆಗೆಯಲಾಗುವುದು ಎಂದು ಎಚ್ಚರಿಸಿದೆ.

RELATED ARTICLES
- Advertisment -
Google search engine

Most Popular