Thursday, June 5, 2025
Google search engine

Homeಸ್ಥಳೀಯಪ್ರಾಣಿ, ಪಕ್ಷಿ ಸಂಕುಲದ ಸಂರಕ್ಷಣೆ ನಮ್ಮ ಹೊಣೆ: ಉರಗ ತಜ್ಞ ಸ್ನೇಕ್ ಶಾಮ್

ಪ್ರಾಣಿ, ಪಕ್ಷಿ ಸಂಕುಲದ ಸಂರಕ್ಷಣೆ ನಮ್ಮ ಹೊಣೆ: ಉರಗ ತಜ್ಞ ಸ್ನೇಕ್ ಶಾಮ್

ಮೈಸೂರು: ಅನಾದಿ ಕಾಲದಿಂದಲೂ ಮನುಷ್ಯನಿಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಇಂದು ಪ್ರಕೃತಿಯ ಅಸಮತೋಲನ, ಮಾನವ ನಿರ್ಮಿತ ಕೆಲವು ತಪ್ಪುಗಳಿಂದ ಪಕ್ಷಿ ಸಂಕುಲ ನಾಶದ ಅಂಚಿನಲ್ಲಿದೆ. ಬೇಸಿಗೆಯ ತಾಪಮಾನದಲ್ಲಿ ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಕಂಗೆಡುವ ಸ್ಥಿತಿ ಇದೆ.  ಪರಿಸರದ ಜತೆಗೆ ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಉರಗ ತಜ್ಞ ಸ್ನೇಕ್ ಶಾಮ್ ಹೇಳಿದರು.

ನಗರದ ಸರಸ್ವತಿಪುರಂ ನಲ್ಲಿರುವ  ಟಿ.ಟಿ.ಎಲ್ ಟ್ರಸ್ಟ್ ಹಾಗೂ ಟಿ.ಟಿ.ಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು ಮತ್ತು ಟಿ.ಟಿ.ಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು  , ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಐಕ್ಯೂಎಸಿ ವತಿಯಿಂದ  ಸುಡುಬಿಸಿಲ ತಾಪಕ್ಕೆ ತಲ್ಲಣಿಸುವ ಮೂಕ ಜೀವಿಗಳ ದಾಹಕ್ಕೆ ಮೌನ ಮಿಡಿತ ಪ್ರಾಣಿ-ಪಕ್ಷಿಗಳಿಗೆ ನೀರು ಉಣಿಸುವ ಚಟುವಟಿಕ ಕಾರ್ಯಕ್ರಮವು ಟಿ.ಟಿ.ಎಲ್ ಕಾಲೇಜ್ ಆವರಣದಲ್ಲಿ   ಹಕ್ಕಿಗಳಿಗೆ ನೀರುಣಿಸಲು ಬಟ್ಟಲು ಹಾಗೂ  ಸಿಮೆಂಟ್ ತೊಟ್ಟಿಗೆ ನೀರ ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿರುವುದು ಮಾದರಿ ಸೇವೆಯಾಗಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳು ಇದನ್ನು ಆಂದೋಲನದ ಮಾದರಿಯಲ್ಲಿ ಜಿಲ್ಲೆಯ ಎಲ್ಲೆಡೆ ಹಮ್ಮಿಕೊಳ್ಳಬೇಕು. ತನ್ಮೂಲಕ ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುವ ವಾತಾವರಣ ನಿರ್ಮಾಣವಾಗಬೇಕು  ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಟಿ. ಎಲ್ ಕಾಲೇಜಿನ ಪ್ರಾಂಶುಪಾಲರು,ಆಡಳಿತ ಮತ್ತು ನಿಯೋಜನ ಅಧಿಕಾರಿ ಡಾ.ಬಿ ವಿ ಪ್ರಶಾಂತ್ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಟಿ.ಟಿ. ಎಲ್  ಟ್ರಸ್ಟ್ನ ಡಾ. ಗೀತಾ ರಾಮ್ ದಾಸ್, ಉರಗ ತಜ್ಞರಾದ ಸ್ನೇಕ್ ಶಾಮ್, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬ್ರಹ್ಮರಂಬ. ಎಸ್, ಪದವಿ ಕಾಲೇಜಿನ ಹಿರಿಯ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾದ ಪ್ರೊ . ಎನ್.ಎಂ. ರಾಮಚಂದ್ರಯ್ಯ,ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಎಚ್ ಆರ್ ಗಿರೀಶ್ , ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಸುಚಿಂದ್ರ, ಮಿರ್ಲೆ ಪನೀಶ್ ಹಾಗೂ ಶಾಲೆಯ ಶಿಕ್ಷಕ /ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular