Tuesday, July 1, 2025
Google search engine

Homeರಾಜ್ಯಸುದ್ದಿಜಾಲಕೆಂಚನಹಳ್ಳಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ ಕೀರ್ತಿ ಶಿಕ್ಷಕರಿಗೆ: ಎಸ್.ವಸಂತಕುಮಾರ

ಕೆಂಚನಹಳ್ಳಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ ಕೀರ್ತಿ ಶಿಕ್ಷಕರಿಗೆ: ಎಸ್.ವಸಂತಕುಮಾರ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಗ್ರಾಮೀಣ ಪ್ರದೇಶದ ಕೆಂಚನಹಳ್ಳಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ ಕೀರ್ತಿ ಶಾಲಾ ಶಿಕ್ಷಕರಿಗೆ ಸಲ್ಲುತ್ತದೆ ಎಂದು ಕುಪ್ಪಹಳ್ಳಿ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಹೇಳಿದರು.
ಸಾಲಿಗ್ರಾಮ ತಾಲ್ಲೂಕಿನ ಕುಪ್ಪಹಳ್ಳಿ ಕ್ಲಸ್ಟರ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಕೆಂಚನಹಳ್ಳಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾದ ಕೆ.ಪಿ.ಕೃಷ್ಣೆಗೌಡ ರ ಸೇವಾ ನಿವೃತ್ತಿಯ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು.

ಕೆಂಚನಹಳ್ಳಿ ಶಾಲೆ ಮಾದರಿ ಶಿಕ್ಷಕರನ್ನು ಒಳಗೊಂಡಿದ್ದು,ಗ್ರಾಮಸ್ಥರ ಮತ್ತು ಪೋಷಕರ ಮತ್ತು ಎಸ್.ಡಿ.ಎಂ.ಸಿ ಸಹಕಾರದಿಂದ, ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದ್ದು, ಶಾಲಾ ಮಕ್ಕಳ ದಾಖಲಾತಿ ಹೆಚ್ಚಾಗುವುದರ ಮೂಲಕ ಗ್ರಾಮೀಣ ಶಾಲೆಗಳ ಸುಧಾರಣೆಯನ್ನು ಕಾಣಬಹುದು ಎಂದು ಹೇಳಿದರು.
ಹಾಗೂ ಕೃಷ್ಣೆಗೌಡ ರವರ ಸುಧೀರ್ಘ 31 ವರ್ಷಗಳ ಶಿಕ್ಷಣ ಇಲಾಖೆಯಲ್ಲಿನ ಸೇವೆಯನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿ, ಕ್ಲಸ್ಟರ್ ನ ಮುಖ್ಯ ಶಿಕ್ಷಕರುಗಳಾದ ಪ್ರಕಾಶ, ಮಂಜುನಾಥ, ಶಿಕ್ಷಕರುಗಳಾದ ಸುಧಾಮಣಿ, ಜಲೇಂದ್ರ, ಚಿತ್ರಶೇಖರ, ಮಹದೇವ, ಭದ್ರಯ್ಯ, ಹೇಮಂತಕುಮಾರ, ಪಲ್ಲವಿ, ಕೋಮಲ, ಸುಜಾತ, ಉಮೇಶ, ರಮೇಶ, ಕುಮಾರ ಶಟ್ಟಿ, ದಶರಥ, ಚಿಕ್ಕೆಗೌಡ, ಕವಿತಾ, ಪದೀಪ,,ಕೆಂಚನಹಳ್ಳಿ ಶಾಲೆಯ ಶಿಕ್ಷಕರಾದ ಶಿವಣ್ಣ, ರಾಘವೇಂದ್ರ, ಶಿವಣ್ಣ, ಪಿರಿಯಾಪಟ್ಟಣ ತಾಲ್ಲೂಕಿನ ಶಿಕ್ಷಕರು, ಅತಿಥಿ ಶಿಕ್ಷಕರು, ಶಾಲೆಯ ಪೋಷಕರು, ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular