Tuesday, June 10, 2025
Google search engine

Homeರಾಜ್ಯಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನಕ್ಕೆ ರೈತರು‌ ಸಹಕಾರ ನೀಡಬೇಕೆಂದು ಡಿ.ಪುನೀತ್ ಮನವಿ

ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನಕ್ಕೆ ರೈತರು‌ ಸಹಕಾರ ನೀಡಬೇಕೆಂದು ಡಿ.ಪುನೀತ್ ಮನವಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಪಶುಸಂಗೋಪನೆ ಇಲಾಖೆ ವತಿಯಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನಕ್ಕೆ ರೈತರು‌ ಸಹಕಾರ ನೀಡಬೇಕೆಂದು ಕುಪ್ಪೆ ಕೃಷಿ ಪತ್ತಿನ‌ಸಹಕಾರ‌ಸಂಘದ ನಿರ್ದೇಶಕ ಚಿಕ್ಕಕೊಪ್ಪಲು ಡಿ.ಪುನೀತ್ ಮನವಿ ಮಾಡಿದ್ದಾರೆ

ಈ ಎರಡು ತಾಲೂಕಿನ‌ ಏಪ್ರಿಲ್ 1 ರಿಂದ 3೦ರ ವರಗೆ ನಡೆಯುವ  ಕಾಲುಬಾಯಿ ಜ್ವರ  ಲಸಿಕೆ ಅಭಿಯಾನ ನಡೆಯಲಿದ್ದು ರೈತರು ತಾವು ಸಾಕಿರುವ ಹಸು ,ಎತ್ತು, ಎಮ್ಮೆ ,ಹೋರಿಗಳ ಆರೋಗ್ಯ ಕಾಪಾಡಲು ಈ ಲಸಿಕೆ ಹಾಕಿಸು ಮೂಲಕ ರಾಸುಗಳ ರಕ್ಷಣೆಗೆ ಮುಂದಾಗುವಂತೆ ಕೋರಿದ್ದಾರೆ.

ರೈತರಿಗೆ ಆರ್ಥಿಕ ಸಂಕಷ್ಟವನ್ನು ಮಾಡುವ ಮಾರಕ ರೋಗವಾದ ಕಾಲುಬಾಯಿ ಜ್ವರ ರೋಗದ ಲಸಿಕೆಯನ್ನು ಮೂರು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ರೈತ ಬಾಂಧವರು ಹಾಕಿಸಿ ರಾಸುಗಳಲ್ಲಿ ಕಂಡು ಬರುವ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿ ಕಡಿಮೆಯಾಗುವುದನ್ನು ತಪ್ಪಿಸ ಬೇಕೆಂದು ರೈತರನ್ನು‌ ಕೋರಿದ್ದಾರೆ.

ಕೆಲವರು ಈ ಲಸಿಕೆ ಹಾಕಿಸಿದರೇ ಹಾಲು ಉತ್ಪಾದನೆ ಕಡಿಮೆ ಅಗಲಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದು‌‌ ಇದರ ಬಗ್ಗೆ ರೈತರು ತಲೆಕೆಡಿಸಿ ಕೊಳ್ಳದೇ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಎಲ್ಲಾ ರೈತ ಬಾಂಧವರು ಕಾಲುಬಾಯಿ ಜ್ವರ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮೆಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಪಶುಸಂಗೋಪನೆ ಇಲಾಖೆಗೆ ಸಹಕಾರ ನೀಡುವಂತೆ ಚಿಕ್ಕಕೊಪ್ಪಲು ಡಿ. ಪುನೀತ್ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular