ವರದಿ :ಸ್ಟೀಫನ್ ಜೇಮ್ಸ್
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೈಡ್ರಾಮಾ ನಡೆದಿದ್ದು, ಭಾನುವಾರ ಖಾಸಗಿ ಹೋಟೆಲ್ ಬಳಿ ಪರಸ್ಪರ ಜಾರಕಿಹೊಳಿ ಮತ್ತು ಸವದಿ ಬಣದ ಬೆಂಬಲಿಗರು ಮಾರಾಮಾರಿ ನಡೆಸಿದ ಘಟನೆ ನಡೆದಿದೆ.
ಮತದಾನ ಹಕ್ಕು ಪಡೆದವರ ಡೆಲಿಗೇಷನ್ ಪಾರ್ಮ್ ಇಟ್ಟುಕೊಂಡ ಆರೋಪ ಮಾಡಿರುವ ಮತದಾರರು ಮತದಾನ ಮಾಡಲು 40 ಡೆಲಿಗೇಷನ್ ಪಾರ್ಮ್ ಕೊಡುತ್ತಿಲ್ಲ ಎಂದು ಸವದಿ ಬಣದ ಬೆಂಬಲಿಗರು ಜಾರಕಿಹೊಳಿ ಬಣದವರ ಮೇಲೆ ಆರೋಪ ಮಾಡಿದ್ದಾರೆ.
ಜಾರಕಿಹೊಳಿ ಪೆನಲ್ನ ಅಭ್ಯರ್ಥಿ ಅಪ್ಪಾಸಾಹೇಬ್ ಕುಲಗೋಡೆ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ಬೆಳಗಾವಿಯ ಖಾಸಗಿ ಹೋಟೆಲ್ಗೆ ನುಗ್ಗಿದ ಬಸನಗೌಡ ಆಸಂಗಿ ಬೆಂಬಲಿಗರು. ರಾಯಬಾಗ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಕಣಕ್ಕಿಳಿದಿರುವ ಬಸನಗೌಡ ಆಸಂಗಿ ಸವದಿ-ಕತ್ತಿ ಬಣದಿಂದ ಕಣಕ್ಕಿಳಿದಿರುವ ಬಸನಗೌಡ ಆಂಸಗಿ. ಹೋಟೆಲ್ ಮುಂಭಾಗದಲ್ಲಿ ಸವದಿ ಹಾಗೂ ಜಾರಕಿಹೊಳಿ ಬೆಂಬಲಿಗರ ಗಲಾಟೆ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಬರಮನಿ. ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರಿಗೆ ಮನವೊಲಿಕೆ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.



                                    