Thursday, June 5, 2025
Google search engine

Homeರಾಜ್ಯಸುದ್ದಿಜಾಲದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಮಂದಿಗೆ ಗಡಿಪಾರು ನೋಟಿಸ್: ಕಾನೂನು ಪ್ರಕ್ರಿಯೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಮಂದಿಗೆ ಗಡಿಪಾರು ನೋಟಿಸ್: ಕಾನೂನು ಪ್ರಕ್ರಿಯೆ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಮಂದಿಯನ್ನು ಗಡಿಪಾರು ಮಾಡುವುದಕ್ಕಾಗಿ ಕಾನೂನು ಪ್ರಕ್ರಿಯೆ ಆರಂಭವಾಗಿದ್ದು, ಹಲವಾರು ಮಂದಿ ಪ್ರಮುಖರು ಈ ಪಟ್ಟಿ ಒಳಗೊಂಡಿದ್ದಾರೆ. ಪುತ್ತೂರಿನ ಬಿಜೆಪಿ ಮುಖಂಡ ಹಾಗೂ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಬೆಳ್ತಂಗಡಿಯ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸಂಘಪರಿವಾರದ ಮುಖಂಡ ಭರತ್ ಕುಮ್ಡೇಲು ಸೇರಿ ಹಲವರಿಗೆ ಗಡಿಪಾರು ನೋಟಿಸ್ ಜಾರಿಯಾಗಿದೆ.

ದ.ಕ. ಜಿಲ್ಲೆಯಿಂದ ಗಡಿಪಾರುವ ಮಾಡುವ ಸಂಬಂಧ ಉಪ ವಿಭಾಗದ ದಂಡಾಧಿಕಾರಿ ಮೂಲಕ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿಯಾಗಿದೆ. ಕರ್ನಾಟಕ ಪೊಲೀಸ್ ಅಧಿನಿಯಮ, 1963 ಕಲಂ: 58ರಡಿ ಈ ನೋಟಿಸ್ ಜಾರಿ ಮಾಡಲಾಗಿದೆ.

ಬಂಟ್ವಾಳ ನಗರ ಠಾಣೆ: ಹಸೈನಾರ್, ಮುಹಮ್ಮದ್ ಸಫ್ವಾನ್, ರಾಜು ಯಾನೆ ರಾಜೇಶ್, ಭುವಿ ಯಾನೆ ಭುವಿತ್ ಶೆಟ್ಟಿ
ಬಂಟ್ವಾಳ ಗ್ರಾಮಾಂತರ ಠಾಣೆ: ಪವನ್ ಕುಮಾರ್, ಚರಣ್ ಯಾನೆ ಚರಣ್ ರಾಜ್, ಅಬ್ದುಲ್ ಲತೀಫ್, ಮುಹಮ್ಮದ್ ಅಶ್ರಫ್, ಮೊಯ್ದಿನ್ ಅದ್ನಾನ್ ಯಾನೆ ಅದ್ದು, ಭರತ್ ರಾಜ್ ಬಿ ಯಾನೆ ಭರತ್ ಕುಮ್ಡೇಲು,
ವಿಟ್ಲ ಪೊಲೀಸ್ ಠಾಣೆ: ಗಣೇಶ ಯಾನೆ ಗಣೇಶ ಪೂಜಾರಿ, ಅಬ್ದುಲ್ ಖಾದರ್ ಯಾನೆ ಶೌಕತ್, ಚಂದ್ರಹಾಸ
ಪೂಂಜಾಲಕಟ್ಟೆ ಠಾಣೆ: ಅಶ್ರಫ್ ಬಿ ಯಾನೆ ಗರಗಸ ಅಶ್ರಫ್.
ಬೆಳ್ತಂಗಡಿ ಠಾಣೆ: ಮನೋಜ್ ಕುಮಾರ್, ಮಹೇಶ ಶೆಟ್ಟಿ ತಿಮರೋಡಿ
ಪುತ್ತೂರು ನಗರ ಠಾಣೆ: ಅರುಣ್ ಕುಮಾರ್ ಪುತ್ತಿಲ, ಹಕೀಂ ಕೂರ್ನಡ್ಕ ಯಾನೆ ಅಬ್ದುಲ್ ಹಕೀಂ, ಅಜಿತ್ ರೈ, ಮನೀಶ್ ಎಸ್., ಅಬ್ದುಲ್ ರಹಿಮಾನ್, ಕೆ.ಅಝೀಝ್,
ಪುತ್ತೂರು ಗ್ರಾಮಾಂತರ ಠಾಣೆ: ಕಿಶೋರ್, ರಾಕೇಶ್ ಕೆ., ನಿಶಾಂತ್ ಕುಮಾರ್,
ಕಡಬ ಠಾಣೆ : ಮುಹಮ್ಮದ್ ನವಾಝ್,
ಉಪ್ಪಿನಂಗಡಿ ಠಾಣೆ: ಸಂತೋಷ್ ಕುಮಾರ್ ರೈ ಯಾನೆ ಸಂತು ಅಡೆಕ್ಕಲ್, ಜಯರಾಮ, ಸಂಶುದ್ದೀನ್, ಸಂದೀಪ್, ಮುಹಮ್ಮದ್ ಶಾಕಿರ್, ಅಬ್ದುಲ್ ಅಝೀಝ್ ಯಾನೆ ಕರಾಯ ಅಝೀಝ್,
ಸುಳ್ಯ ಠಾಣೆ : ಲತೇಶ್ ಗುಂಡ್ಯ, ಮನೋಹರ ಯಾನೆ ಮನು
ಬೆಳ್ಳಾರೆ ಠಾಣೆ : ಪ್ರಸಾದ್, ಶಮೀರ್ ಕೆ.

RELATED ARTICLES
- Advertisment -
Google search engine

Most Popular