Saturday, June 28, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳ ಕೊಲೆ ಪ್ರಕರಣ ಮತ್ತೆ ಸದ್ದು: ಮಂಗಳೂರು ಎಸ್‌ಪಿ ಕಚೇರಿಗೆ ವಕೀಲರ ಭೇಟಿ

ಧರ್ಮಸ್ಥಳ ಕೊಲೆ ಪ್ರಕರಣ ಮತ್ತೆ ಸದ್ದು: ಮಂಗಳೂರು ಎಸ್‌ಪಿ ಕಚೇರಿಗೆ ವಕೀಲರ ಭೇಟಿ

ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣ ಮತ್ತೆ ಸದ್ದು ಮಾಡ್ತಿದೆ. ಕೊಲೆ ಮಾಡಿ ಹೆಣ ಹೂತಿದ್ದ ಸ್ಥಳಗಳನ್ನು ಗುರುತಿಸುವುದಾಗಿ ಇತ್ತೀಚೆಗೆ ವ್ಯಕ್ತಿಯೊಬ್ಬ ಪೊಲೀಸರ ಮುಂದೆ ಹೇಳಿದ್ದ ಎಂಬ ವಿಚಾರಗಳ ಮಧ್ಯೆ ಇದೀಗ ಬೆಂಗಳೂರಿನ ವಕೀಲರ ತಂಡವು ಇಂದು ಮಂಗಳೂರು ಎಸ್ ಪಿ ಕಚೇರಿಗೆ ಅಗಮಿಸಿತು.

ದಕ್ಷಿಣ ಕನ್ನಡ ಎಸ್ ಪಿ ಯವರನ್ನು ಭೇಟಿಯಾಗಿ ದಾಖಲೆಗಳನ್ನು ನೀಡುವುದಾಗಿ ಇತ್ತೀಚೆಗೆ ವಕೀಲರಿಬ್ಬರು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದರು.‌ ಜಿಲ್ಲಾ ಎಸ್ಪಿ ಭೇಟಿಗಾಗಿ ವಕೀಲ ತಂಡ ಮಂಗಳೂರಿಗೆ ಅಗಮಿಸಿದ್ದರೂ ತುರ್ತು ಕೆಲಸ ನಿಮಿತ್ತ ಎಸ್ ಪಿ ಡಾ.ಅರುಣ್ ಬೆಂಗಳೂರಿಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ನಾಳೆ ಮತ್ತೆ ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular