Sunday, June 1, 2025
Google search engine

Homeಸ್ಥಳೀಯಪ್ರಸ್ತುತ ಕೊವೀಡ್19 ಕುರಿತು ಆತಂಕ ಬೇಡ : ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಸಿ.ಕುಮಾರಸ್ವಾಮಿ

ಪ್ರಸ್ತುತ ಕೊವೀಡ್19 ಕುರಿತು ಆತಂಕ ಬೇಡ : ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಸಿ.ಕುಮಾರಸ್ವಾಮಿ

ಮೈಸೂರು: ಜೆಎಸ್‍ಎಸ್ ರೇಡಿಯೋ 91.2ಎಫ್‍ಎಂ ಸಮುದಾಯ ಬಾನುಲಿ ಕೇಂದ್ರವು ಆಯೋಜಿಸಲಾಗಿದ್ದ,  ಪ್ರಸ್ತುತ ಕೊವೀಡ್19 ಮತ್ತು ಅದರ ಸ್ಥಿತಿಗತಿಗಳ ಕುರಿತ ನೇರ ಸಂದರ್ಶನ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೈಸೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಪಿ.ಸಿ.ಕುಮಾರಸ್ವಾಮಿ ರವರು ಪ್ರಸ್ತುತ ಕೋವಿಡ್ 19 ಸೌಮ್ಯವಾಗಿದ್ದು, ಸಾರ್ವಜನಿಕರು ಇದರ ಕುರಿತು ಆತಂಕ ಬೇಡ ಎಂದು ತಿಳಿಸಿದರು.

ಪ್ರಸ್ತುತ ಕಾಣಿಸಿಕೊಳ್ಳುತ್ತಿರುವ ಕೋವಿಡ್ 19 ಕುರಿತಂತೆ ಜನಜಾಗೃತಿಗಾಗಿ ಆಯೋಜಿಸಿದ್ದ ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಪಿ.ಸಿ.ಕುಮಾರಸ್ವಾಮಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು, ಹಾಗೂ ಕೊವೀಡ್19 ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಕೇಳುಗರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು ಪ್ರಸ್ತುತ ಮೈಸೂರಿನಲ್ಲಿ 102 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 11ಜನರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಹಾಗೂ ಇವರಲ್ಲಿ ಯಾರಿಗೂ ಸಹ ತೀವ್ರ ಸಮಸ್ಯೆಗಳು ಕಂಡುಬಂದಿರುವುದಿಲ್ಲ ಬದಲಾಗಿ ಎಲ್ಲವೂ ಸೌಮ್ಯವಾಗಿಯೇ ಕಾಣಿಸಿಕೊಂಡಿದೆ. ಹಾಗಾಗಿ ಯಾರು ಗಾಬರಿಯಾಗುವಂತ್ತಿಲ್ಲ ಎಂದರು.

ಜಿಲ್ಲಾಡಳಿತ ಮತ್ತು ಇಲಾಖೆಯು ಮುಂಜಾಗ್ರತವಾಗಿ ಬೇಕಾಗುವಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಒಂದು ವೇಳೆ ಯಾವುದೇ ರೀತಿಯ ಕೋವಿಡ್ 19 ತೀವ್ರತೆ ಕಾಣಿಸಿಕೊಂಡರೆ ಅದಕ್ಕೆ ಪೂರಕ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಲಾಖೆಯು ಆರೋಗ್ಯ ಕಾರ್ಯಕರ್ತರ ಮೂಲಕ ಜನಸಾಮಾನ್ಯರಿಗೆ ಮಾಹಿತಿಯನ್ನು ನೀಡುತ್ತಿದ್ದು, ಸಾರ್ವಜನಿಕರು ತಮಗೆ ಯಾವುದೇ ಅನುಮಾನಗಳು ಇದ್ದಲ್ಲಿ ಇಲಾಖೆಯ ಮೂಲಕ ಸೂಕ್ತ ಹಾಗೂ ನಿಖರ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮವನ್ನು ಜೆಎಸ್‍ಎಸ್ ರೇಡಿಯೋ ಕೇಂದ್ರದ ಸಂಯೋಜಕ ಹಾಗೂ ನಿರೂಪಕರೂ ಆದ ಶ್ರೀ ಶಿವಕುಮಾರ ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಹಾಯಕ ಶ್ರೀ ಎಸ್. ರಮೇಶ್ ಹಾಗೂ ಉದ್ಘೋಷಕಿ ಶ್ರೀಮತಿ ಎಂ. ಕನ್ಯಾಕುಮಾರಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular