ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಆರಂತೋಡು ಕಿರ್ಲಾಯದಲ್ಲಿ ತೋಟಕ್ಕೆ ರಾತ್ರಿ ಆನೆಗಳ ಗುಂಪು ದಾಳಿ ನಡೆಸಿ ಅಪಾರ ಬಾಳೆ ಕೃಷಿ ಹಾನಿ ಮಾಡಿದೆ.
ಅರಂತೋಡು ಗ್ರಾಮದ ದೇರಾಜೆ, ಗುಂಡ್ಲ, ಕಳುಬೈಲು, ಬನ, ಕಿರ್ಲಾಯ ಇಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಕೃಷಿಯನ್ನೇ ಅವಲಂಬಿತವಾಗಿರುವ ಈ ಬಾಗದ ಕೃಷಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ತೊಂದರೆ ಮಾಡುತ್ತಿರುವ ಆನೆಗಳನ್ನು ದಟ್ಟ ಕಾಡಿಗೆ ಅಟ್ಟಿಸುವುದಕ್ಕೆ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೊಂದ ಕೃಷಿಕರು ತಿಳಿಸಿದ್ದಾರೆ.