ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಳೆದ ೨೭ ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿರುವ ಕೊಗಿಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಟಿ.ಪುರುಷೋತ್ತಮ ಮಾದರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.
ಸಾಲಿಗ್ರಾಮ ತಾಲೂಕಿನ ಕೋಗಿಲೂರು ಗ್ರಾಮದ ಸಾರ್ವಜನಿಕರು ಮತ್ತು ಪೋಷಕರು ಸೋಮವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಟಿ.ಪುರುಷೋತ್ತಮ ಅವರಿಗೆ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ತಮ್ಮ ಸೇವಾವಧಿಯಲ್ಲಿ ಕೆಲಸ ಮಾಡಿದ ಎಲ್ಲಾ ಕಡೆಗಳಲ್ಲಿಯೂ ಪ್ರೀತಿ ವಿಶ್ವಾಸ ಗಳಿಸಿರುವ ಇವರು ವಿಶೇಷ ವ್ಯಕ್ತಿತ್ವಯುಳ್ಳ ಸಾಧಕ ಎಂದರು.
ಸರ್ಕಾರಿ ನೌಕರಿಯಲ್ಲಿ ಶ್ರೇಷ್ಠವಾದ ವೃತ್ತಿ ಅಕ್ಷರ ಕಲಿಸುವ ಶಿಕ್ಷಕ ವೃತ್ತಿಯಾಗಿದ್ದು ತಮ್ಮ ಕೆಲಸದ ಅವಧಿಯಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು ಅವರಿಗೆ ಅಕ್ಷರ ದಾನ ಮಾಡುವ ಶಿಕ್ಷಕರು ಅಭಿನಂದನೆಗೆ ಅರ್ಹರಾಗಿದ್ದು ಅವರನ್ನು ಸಮಾಜ ಸದಾ ಗೌರವಿಸಬೇಕು ಎಂದು ತಿಳಿಸಿದರು.
ಕೋಗಿಲೂರು ಗ್ರಾಮದ ಎಲ್ಲಾ ನಾಗರೀಕರು ಮತ್ತು ನೂರಾರು ಶಿಕ್ಷಕ ಬಾಂಧವರು ಒಂದೆಡೆ ಸೇರಿ ಸೇವಾ ನಿವೃತ್ತಿ ಹೊಂದುತ್ತಿರುವ ಟಿ.ಪುರುಷೋತ್ತಮ್ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೋಡುಗೆ ನೀಡುತ್ತಿರುವುದು ಅವರ ಸೇವಾ ಬದ್ದತೆಗೆ ಉತ್ತಮ ಉದಾಹರಣೆಯಾಗಿದ್ದು ಇಂತಹ ಶಿಕ್ಷಕರ ಸಂತತಿ ನರ್ಮಡಿಯಾಗಲಿ ಎಂದರು.
ಜಿ.ಪಂ. ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭಾಸ್ಕರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಸ್ವಾಮಿ, ಮಾಜಿ ಅಧ್ಯಕ್ಷರಾದ ಒಂಟಿಮನೆನಾಗರಾಜು, ರಾಜಶೇಖರ್, ತಾಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸೈಯದ್ರಿಜ್ವಾನ್, ಸಾಮರಸ್ಯ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸುರೇಶ್, ನಿರ್ದೇಶಕ ಮಂಜುರಾಜ್ ಮಾತನಾಡಿ ಟಿ.ಪುರುಷೋತ್ತಮ್ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಶಿಕ್ಷಣ ಸಂಯೋಜಕರಾದ ದಾಸಪ್ಪ, ಜನಾರ್ಧನ್, ಅಕ್ಷರ ದಾಸೋಹದ ನಿರ್ದೇಶಕ ಸ್ವಾಮಿಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರಸ್ವಾಮಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಎನ್.ಪ್ರಭು, ನಿವೃತ್ತ ಶಿಕ್ಷಕ ಸಿ.ಟಿ.ಜಗದೀಶ್, ಗುತ್ತಿಗೆದಾರ ಸಿ.ಬಿ.ಲೋಕೇಶ್, ಪ್ರಗತಿ ಪರ ರೈತ ಸತ್ಯಪ್ಪ, ಶಿಕ್ಷಕರಾದ ಪುಟ್ಟಸ್ವಾಮಿ, ಡಿ.ಟಿ.ಕುಮಾರ್, ಮಾದೇಗೌಡ, ಮೈಸೂರು ನಗರದ ಪರಸ್ಪರ ಸ್ನೇಹ ಬಳಗದ ಕೆಂಚೇಗೌಡ, ಭಗವಾನ್, ಶಿವಪ್ಪ, ಅಶೋಕ್, ಧನಂಜಯ್, ಭಾಗ್ಯಲಕ್ಷಿö್ಮ, ಶರ್ಮದಿಖಾನಂ, ಎಸ್ಡಿಎಂಎಸಿ ಅಧ್ಯಕ್ಷ ರಾಜಶೇಖರ್, ಗ್ರಾಮದ ಯಜಮಾನ ಪುಟ್ಟರಾಜೇಗೌಡ ಮತ್ತಿತರರು ಇದ್ದರು.