ಮೈಸೂರು: ನಾನು ವರ್ಣಚಿತ್ರ ಕಲಾವಿದ ಹಾಗೂ ಛಾಯಾಗ್ರಹಣ ಕಲಾವಿದನಾಗಿದ್ದು, ಕುಕ್ಕರಹಳ್ಳಿ ಕೆರೆಯೊಡನೆ ಹೊಂದಿರುವ ಭಾವನಾತ್ಮಕ ಸಂಬಂಧ ಕುರಿತಂತೆ ಸೆರೆ ಹಿಡಿದಿರುವ ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನವನ್ನು ನಾಳೆ ಮಾ.೨೨ ರಿಂದ ೩೧ ರವರೆಗೆ ಸರಸ್ವತಿಪುರಂನ ರಮ್ಯ ರೆಸ್ಟೋರೆಂಟ್ ಎದುರಿನ ಹೆರಿಟೇಜ್ ಹೌಸ್ನಲ್ಲಿ ಆಯೋಜಿಸಲಾಗಿದೆ ಎಂದು ಸುನಿಲ್ ರಾಜು ತಿಳಿಸಿದರು. ನಾಳೆ ಬೆಳಗ್ಗೆ ೧೦.೩೦ರಿಂದ ಸಂಜೆ ೭ರವರೆಗೆ ಪ್ರದರ್ಶನಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಇಲ್ಲಿ ೨೧ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಪ್ರತಿಯೊಂದೂ ತಮ್ಮದೇ ಆದ ವಿಶೇಷತೆ ಹೊಂದಿವೆ. ಗಾಳಿ, ಸೂರ್ಯನ ಬಿಂಬ, ಪಕ್ಷಿ ಮೊದಲಾದವುಗಳೊಡನೆ ಹೊಂದಿರುವ ವ್ಯಕ್ತಿಗತ ಅನುಭವವನ್ನು ಇಲ್ಲಿ ಅನುಭವಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.