Saturday, June 7, 2025
Google search engine

Homeರಾಜ್ಯಸುದ್ದಿಜಾಲಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದ ರೈತರ ಆರ್ಥಿಕ ಒತ್ತಡ: ಚಿಕ್ಕಕೊಪ್ಪಲು ಡಿ. ಪುನೀತ್ ಆಕ್ರೋಶ

ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದ ರೈತರ ಆರ್ಥಿಕ ಒತ್ತಡ: ಚಿಕ್ಕಕೊಪ್ಪಲು ಡಿ. ಪುನೀತ್ ಆಕ್ರೋಶ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದಿನ ಬಳಕೆಯ ಹಾಲಿನಿಂದ ಹಿಡಿದು ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ಸರಕು, ಸೇವೆಗಳು ದುಬಾರಿಯಾಗುತ್ತಿರುವ ಕಾಲದಲ್ಲೇ ಖಾಸಗಿ ಅನುದಾನಿತ ಶಾಲೆಗಳ (ಕಾನ್ವೆಂಟ್) ಶುಲ್ಕದಲ್ಲೂ ಭಾರೀ ಏರಿಕೆಯಾಗಿದ್ದು ರೈತರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಕಾನ್ವೆಂಟ್ ಗಳಲ್ಲಿ ಶಿಕ್ಷಣ ಕೊಡಿಸಲು ಸಾಲ ಮಾಡುವ ಪರಿಸ್ಥಿತಿ ಬಂದಿದೆ ಎಂದು ಚುಂಚನಕಟ್ಟೆ ಹೋಬಳಿಯ ಕುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ಧೆಶಕ ಹಾಗು ಪ್ರಗತಿಪರ ಚಿಂತಕ ಚಿಕ್ಕಕೊಪ್ಪಲು ಡಿ. ಪುನೀತ್ ಖಾಸಾಗಿ ಶಾಲೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಅವರು ಸರ್ಕಾರ ರೈತರಿಂದ ಭತ್ತ, ರಾಗಿ, ಕಬ್ಬು ಮುಂತಾದ ಬೆಳೆಗಳನ್ನು ಖರೀದಿ ಮಾಡಿ ಎರಡ್ಮೂರು ತಿಂಗಳು ಕಳೆದರು ರೈತರ ಅಕೌಂಟ್ ಗೆ ಹಣ ಹಾಕಲ್ಲ, ಅಂತಹದರಲ್ಲಿ ಖಾಸಾಗಿ ಶಾಲೆಗಳು(ಕಾನ್ವೆಂಟ್) ದುಬಾರಿ ಶುಲ್ಕ ಪಡೆದು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವ ರೈತರಿಗೆ ಯಾವುದೇ ವಿನಾಯಿತಿ ಕೂಡ ಇಲ್ಲದಂತಾಗಿದೆ ಇನ್ನಾದರೂ ಖಾಸಾಗಿ ಶಾಲೆಗಳು ರೈತರ ಮಕ್ಕಳ ಶಿಕ್ಷಣದ ಶುಲ್ಕ ಕಟ್ಟಲು ಕಾಲ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷಗಳು ರೈತರು ಈ ದೇಶದ ಬೆನ್ನೆಲುಬು ಅಂತೆಲ್ಲ ಬೊಬ್ಬೆ ಹೊಡೆಯುತ್ತಾರೆ, ಇವರ ಮಕ್ಕಳು ಖಾಸಾಗಿ ಶಾಲೆಗಳಲ್ಲಿ ಓದ ಬೇಕು ರೈತರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದ ಬೇಕು ಇದ್ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.

ಶಾಲಾ ಶುಲ್ಕದ ಏರಿಕೆಯ ಜೊತೆಗೆ ಮಕ್ಕಳ ಶಾಲಾ ವಾಹನದ ಶುಲ್ಕ, ಪಠ್ಯಪುಸ್ತಕದ ಶುಲ್ಕ, ಸಮವಸ್ತ್ರದ ಶುಲ್ಕ ಹೀಗೆ ಎಲ್ಲವೂ ಏರಿಕೆಯಾಗಿದ್ದು, ಆರ್ಥಿಕವಾಗಿ ಭಾರೀ ಹೊರೆಯಾಗಿದೆ ಎಂದು ಪೋಷಕರು ನೋವು ತೋಡಿಕೊಳ್ಳುತ್ತಿದ್ದಾರೆ. ಖಾಸಗಿ ಶಾಲೆಗಳು ತಮ್ಮ ಶುಲ್ಕ ಸಂರಚನೆಯನ್ನು ಶಾಲೆಯ ನೋಟಿಸ್‌ ಬೋರ್ಡ್‌ನಲ್ಲಿ ಹಾಕಬೇಕು ಎಂಬ ನಿಯಮವಿದೆ. ಆದರೆ ಹಲವು ಖಾಸಗಿ ಶಾಲೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಪೋಷಕರು ದೂರುತ್ತಾರೆ.

ಖಾಸಗಿ ಶಾಲೆಗಳ ಶುಲ್ಕ ಏರಿಕೆಗೆ ಲಗಾಮು ಹಾಕಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿರುವ ಅವರು ಆದರೆ ಖಾಸಗಿ ಅನುದಾನರಹಿತ ಶಾಲೆಗಳ ಶುಲ್ಕ ನಿಗದಿಯಲ್ಲಿ ನಮಗೆ ಅಧಿಕಾರವಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಈ ಬಗ್ಗೆ ಸರ್ಕಾರ ಸೂಕ್ರ ಕ್ರಮ ಜರುಗಿಸ ಬೇಕೆಂದು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular