ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮ ಪಂಚಾಯತ್ ನ 2021 ರಿಂದ 2026 ರ ವರೆಗಿನ ಆಡಳಿತ ಮಂಡಳಿಯ ಗೌರವಾಭಿನಂದನಾ ಕಾರ್ಯಕ್ರಮವು ಪೆರಾಜೆ ಗ್ರಾಮ ಪಂಚಾಯತ್ ಕಚೇರಿ ಸಭಾಭವನದಲ್ಲಿ ನಡೆಯಿತು. ಇದೇ ವೇಳೆ
ಇತ್ತೀಚೆಗೆ ಪೆರಾಜೆ ಗ್ರಾಮ ಪಂಚಾಯತ್ ನಿಂದ ವರ್ಗಾವಣೆಗೊಂಡು ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶಂಭು ಕುಮಾರ ಶರ್ಮ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಆಡಳಿತ ಮಂಡಳಿಯವರು ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು.
ವರದಿ: ಶಂಶೀರ್ ಬುಡೋಳಿ



