Sunday, June 22, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲ್ಲೂಕಿನ ಹೊಸೂರಿನಲ್ಲಿ ತಂಬಾಕು ಹದಗೊಳಿಸುವ ಬ್ಯಾರೇನ್‌ಗೆ ಬೆಂಕಿ: ಲಕ್ಷಾಂತರ ನಷ್ಟ

ಸಾಲಿಗ್ರಾಮ ತಾಲ್ಲೂಕಿನ ಹೊಸೂರಿನಲ್ಲಿ ತಂಬಾಕು ಹದಗೊಳಿಸುವ ಬ್ಯಾರೇನ್‌ಗೆ ಬೆಂಕಿ: ಲಕ್ಷಾಂತರ ನಷ್ಟ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ತಂಬಾಕು ಹದಗೊಳಿಸುವ ವೇಳೆ ಆಕಶ್ಮಿಕ ಬೆಂಕಿ ತಗಲಿ ಬ್ಯಾರೇನ್ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಹಳಿಯೂರು ಬಡಾವಣೆ ನಿವಾಸಿ ಗೌರಮ್ಮ ಎಂಬುವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರೇನ್ ಸುಟ್ಟು ಹೋಗಿದ್ದು ಸುಮಾರು 4 ಲಕ್ಷದಷ್ಟು ನಷ್ಟ ಸಂಭವಿಸಿದೆಎಂದು ಅಂದಾಜಿಸಲಾಗಿದೆ.

ಶನಿವಾರ ಬೆಳಗಿನ ಜಾವ 3.15 ಸುಮಾರಿನಲ್ಲಿ ಈ ಘಟನೆ ನಡೆದಿದ್ದು ತಕ್ಷಣವೇ ಗೌರಮ್ಮ ಕುಟುಂಬಸ್ಥರು ಎತ್ತೆಚ್ಚು ಕೊಂಡು ಬೆಂಕಿ ಆರಿಸಿ ಮುಂದೆ ಅಗಬಹುದಾಗಿದ್ದ ಅನಾಹುತಾ ತಪ್ಪಿಸಿದ್ದಾರೆ. ಘಟನ ಸ್ಥಳಕ್ಕೆ ಕಟ್ಟೆಮಳಲವಾಡಿ ವಿಭಾಗದ ತಂಬಾಕು ಮಂಡಳಿಯ ಅಧಿಕಾರಿ ಸಂಜನಾ ಬೇಟಿ ನೀಡಿ ಪರಿಶೀಲನೆ ನಡೆಸಿ ತಂಬಾಕು ಮಂಡಳಿಯಿಂದ ಸಿಗುವ ನಷ್ಟ ಪರಿಹಾರವನ್ನು ಒದಗಿಸುವ ಭರವಸೆ ನೀಡಿದರು.

ಸ್ಥಳಕ್ಕೆ ಬೇಟಿ ನೀಡಿದ ಹೊಸೂರು ಡೈರಿ ಮಾಜಿ‌ ಅಧ್ಯಕ್ಷ ಎಚ್.ಜೆ‌.ರಮೇಶ್ , ಮಾಜಿ ನಿರ್ದೇಶಕ ಎಚ್.ಎಸ್‌.ರವಿ, ವಕೀಲ ಪಣಿ ಅವರು ಗೌರಮ್ಮ ಅವರಿಗೆ ಸ್ವಾಂತನ ಹೇಳಿ ಶಾಸಕ ಡಿ.ರವಿಶಂಕರ್ ಅವರ ಮೂಲಕ‌ ಸರ್ಕಾರದಿಂದ ಸಿಗುವ ಪರಿಹಾರ ಒದಗಿಸಿ ಕೊಡುವುದಾಗಿ ತಿಳಿಸಿದರು.

RELATED ARTICLES
- Advertisment -
Google search engine

Most Popular