Monday, June 9, 2025
Google search engine

Homeರಾಜ್ಯಸುದ್ದಿಜಾಲಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ

ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್. ನಗರ : ನ್ನನ್ನು ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ ಮತದಾರ ಪ್ರಭುಗಳಿಗೆ ತಾನು ಪರಿಶ್ರಮದಿಂದ ಗಳಿಸಿದ ಹಣವನ್ನು ವಿನಿಯೋಗ ಮಾಡಿದ್ದು,ಹಣದ ಲೆಕ್ಕ ಕೊಡಿ ಎನ್ನಲೂ ನೀವು ಫೈನಾನ್ಸಿಯರ್ರಾ ಎಂದು ಶಾಸಕ ಡಿ.ರವಿಶಂಕರ್ ಅವರ ವಿರುದ್ದ ಮಾಜಿ ಶಾಸಕ ಸಾ.ರಾ.ಮಹೇಶ್ ಹರಿಹಾಯ್ದರು.

ಸಾಲಿಗ್ರಾಮ ಪಟ್ಟಣದ ಕೃಷ್ಣಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್ ಹಾಗು ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ನಾನು ೪೦೦ ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚ ಮಾಡಿರುವುದು ಯಾರಿಂದಲೋ ಲಂಚ ಪಡೆದ ಹಣವಲ್ಲ.ನನ್ನ ಅಧಿಕಾರವಧಿಯಲ್ಲಿ ವರ್ಗಾವಣೆಗಾಗಲಿ,ಗುತ್ತಿಗೆದಾರರಿಂದಾಗಲಿ ಒಂದು ನಯಾಪೈಸೆ ಹಣ ಪಡೆದಿಲ್ಲ.ನಾನು ಜನರ ಒಳಿತಿಗಾಗಿ ಖರ್ಚು ಮಾಡಿರುವ ಹಣವನ್ನು ನಿಮ್ಮ ನಾಯಕರಾಗಲಿ,ನೀವಾಗಲಿ ಜನ್ಮಪೂರ್ತಿ ವ್ಯಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಗೆದ್ದು ೧೦ ತಿಂಗಳು ಕಳೆದರೂ ಕ್ಷೇತ್ರದಲ್ಲಿ ಒಂದೆ ಒಂದು ಅಭಿವೃದ್ದಿ ಕೆಲಸಗಳಾಗಿಲ್ಲ. ಭತ್ತದ ಕಣಜ ನೀರಿಲ್ಲದೆ ಬರಡಾಗಿದೆ ಎಂದು ಹಾಲಿ ಶಾಸಕರನ್ನು ಟೀಕಿಸಿದರು. ಕೃಷ್ಙರಾಜನಗರ ಕ್ಷೇತ್ರದ ಮತದಾರರು ಸತತ ಮೂರುಬಾರಿ ಆಯ್ಕೆ ಮಾಡಿದ್ದು ನನ್ನನ್ನು ಮಾತ್ರ.ಈ ಕ್ಷೇತ್ರದಲ್ಲಿ ನನ್ನ ಸಮಾಜದ ಜನರು ಇರುವುದು ಶೇ.೩೦ ರಷ್ಟು ಮಾತ್ರ.ಎಲ್ಲ ಸಮಾಜದವರ ಪ್ರೀತಿಗೆ ಪಾತ್ರನಾದುದರಿಂದ ನಾನು ಮೂರುಬಾರಿ ಗೆಲ್ಲಲು ಸಾಧ್ಯವಾಯಿತು.

ಈ ಬಗ್ಗೆ ನನಗೆ ಹೆಮ್ಮೆಯಿದೆ.ಸೋತಿರಬಹುದು.ಆದರೆ ನಿಜವಾಗಲೂ ನಾನು ಈಗ ಆರಾಮಾಗಿದ್ದೇನೆ.ನನ್ನ ನಂಬಿದ ಕಾರ್ಯಕರ್ತರು,ಜನರನ್ನು ಎಂದೂ ಕೈಬಿಡುವುದಿಲ್ಲ ಎಂದರು. ಮೋದಿಯವರು ವಿಶ್ವದ ನಾಯಕ.ಭಾರತದ ಹೆಸರನ್ನು ಆಕಾಶದೆತ್ತರಕ್ಕೆ ಏರಿಸಿದ್ದಾರೆ.ನಮ್ಮನಾಯಕ ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಂಕಷ್ಟಗಳನ್ನು ಬಗೆಹರಿಸಿದ್ದಾರೆ.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಕುಮಾರಣ್ಣ ಸಾಲಿಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಕುಮಾರಣ್ಣನವರನ್ನು ಗೆಲ್ಲಿಸುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಗೇರಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಸಾಲಿಗ್ರಾಮ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ಆರ್.ಪ್ರಕಾಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್‌ರಾಜಣ್ಣ, ಪ್ರಧಾನಕಾರ್ಯದರ್ಶಿ ಬೆಣಗನಹಳ್ಳಿ ಪ್ರಸನ್ನ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಮಧುಚಂದ್ರ, ಯುವ ಜೆಡಿಎಸ್ ಘಟಕದ ಅಧ್ಯಕ್ಷ ಕರ್ತಾಳು ಮಧು, ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್, ಜೆಡಿಎಸ್ ಮುಖಂಡರಾದ ಎಂ.ಟಿ.ಕುಮಾರ್, ಮಿರ್ಲೆ ಎಂ.ಆರ್. ನಾಗೇಶ್, ಚಂದ್ರಶೇಖರ್ ,ಹನಸೋಗೆ ನಾಗರಾಜ್, ರಾಧಾಕೃಷ್ಣ, ಮಕ್ತಾರ್ ಪಾಷಾ, ಸಿ.ಕೆ.ವೈರಮುಡಿ, ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಣಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

RELATED ARTICLES
- Advertisment -
Google search engine

Most Popular