Thursday, June 26, 2025
Google search engine

Homeರಾಜ್ಯಸುದ್ದಿಜಾಲಜುಲೈ 16ರಂದು ಹರದನಹಳ್ಳಿ ವಿಜಯ್ ಕುಮಾರ್ ಅವರ 51ನೇ ಹುಟ್ಟುಹಬ್ಬ: 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು...

ಜುಲೈ 16ರಂದು ಹರದನಹಳ್ಳಿ ವಿಜಯ್ ಕುಮಾರ್ ಅವರ 51ನೇ ಹುಟ್ಟುಹಬ್ಬ: 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ- ಜಿ.ಟಿ. ದೇವೇಗೌಡ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ನನ್ನ ಆತ್ಮೀಯ ಸಹೋದರ ಹರದನಹಳ್ಳಿ ವಿಜಯ್ ಕುಮಾರ್ ಅವರ 51ನೇ ಹುಟ್ಟುಹಬ್ಬ ಮಹೋತ್ಸವ ಜುಲೈ 16 ರಂದು ಅದ್ದೂರಿಯಾಗಿ ನಡೆಯಲಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು, ಹಿತೈಷಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

ತಾಲೂಕಿನ ಹರದನಹಳ್ಳಿಯ ವಿಜಯ್ ಕುಮಾರ್ ಅವರ ನಿವಾಸದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ್ ಅವರ ಕುಟುಂಬ ಹಾಗು ಸ್ನೇಹಿತರ ಅಪೇಕ್ಷೆ ಮೇರೆಗೆ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಸರಳ ಸಜ್ಜನಿಕೆಯ, ಮೃದು ಸ್ವಭಾವದ ಉದ್ಯಮಿಯೂ ಆದ ವಿಜಯ್ ಕುಮಾರ್ ಅವರು ಅಪಾರ ಸಂಖ್ಯೆಯ ಅಭಿಮಾನಿಗಳು, ಹಿತೈಷಿಗಳನ್ನು ಹೊಂದಿದ್ದು, ಎಲ್ಲಾರೂ ಆಗಮಿಸಿ ಶುಭ ಹಾರೈಸಬೇಕೆಂದು ಮನವಿ ಮಾಡಿದರು.

ವಿಜಯ್ ಅವರು ಸ್ವಾಭಿಮಾನಿಯಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ರಾಜಕೀಯ ಅಧಿಕಾರದ ಅವಶ್ಯಕತೆ ಇಲ್ಲ. ಒಬ್ಬ ಮಾದರಿ ರೈತನಾಗಿ ಪ್ರಗತಿಪರ ಕೃಷಿಕನಾಗಿ ಗಮನ ಸೆಳೆದಿದ್ದಾರೆ. ಹುಟ್ಟುಹಬ್ಬ ಕಾರ್ಯಕ್ರಮದ ಮೂಲಕ ರಾಜಕಾರಣಕ್ಕೆ ಧುಮುಕುವ ಯಾವುದೇ ಆಲೋಚನೆ ಅವರು ಹೊಂದಿಲ್ಲ. ವಿಜಯ್ ಅವರಿಗೆ ಮುಂದೆ ರಾಜಕೀಯವಾಗಿ ಉನ್ನತ ಸ್ಥಾನಮಾನ ಸಿಗಲೂಬಹುದು ಎಂದರು. ವಿಜಯ್ ಅವರಿಗೆ ಗುರುಗಳು ,ದೇವರು ಹಿತೈಷಿಗಳ ಆಶೀರ್ವಾದ ಇದೆ. ಶ್ರೀ ಪುರುಷೋತ್ತಮಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಹುಟ್ಟುಹಬ್ಬದ ಸಮಾರಂಭದಲ್ಲಿ ನಾಡಿನ ಹಲವು ಗಣ್ಯರು, ಮಠಾಧೀಶರು ಭಾಗವಹಿಸಲಿದ್ದು, ಸಮಾರಂಭದಲ್ಲಿ ಗರ್ಭಿಣಿಯರಿಗೆ ಸೀಮಂತ, ಬಾಗಿನ ಸಮರ್ಪಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸೇರಿದಂತೆ ಹತ್ತು,- ಹಲವು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಒಟ್ಟಾರೆ ವಿಜಯ್ ಅವರ ಹುಟ್ಟುಹಬ್ಬ ಜಾತ್ಯಾತೀತ, ಪಕ್ಷಾತೀತವಾಗಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು. ಇದಕ್ಕೂ ಮುನ್ನ ಸಮಾರಂಭ ನಡೆಯುವ ಸ್ಥಳವನ್ನು ಪರಿಶೀಲಿಸಿ ಸೂಕ್ತ ಸಲಹೆ ಸೂಚನೆ ನೀಡಿದರು.

ಹರದನಹಳ್ಳಿ ವಿಜಯ್ ಮಾತನಾಡಿ, ನಾನು ಪ್ರತಿ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದೆ. 50 ವರ್ಷ ಪೂರೈಸಿ ಐವತ್ತೊಂದನೇ ವಸಂತಕ್ಕೆ ಕಾಲಿಡುತ್ತಿರುವ ಹೊತ್ತಲ್ಲಿ ನನ್ನ ಕುಟುಂಬ ಹಾಗೂ ಹಿತೈಷಿಗಳು ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಒತ್ತಾಯ ಮಾಡಿದರು. ನನ್ನ ಮಾರ್ಗದರ್ಶಕರು, ಮಾಜಿ ಸಚಿವರು,ಶಾಸಕರಾದ ಜಿ. ಟಿ. ದೇವೇಗೌಡ ಅವರ ನೇತೃತ್ವದಲ್ಲಿ ನನ್ನ ಹುಟ್ಟುಹಬ್ಬ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಮುಲ್ ನಿರ್ದೇಶಕ ಎ. ಟಿ. ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಮುಖಂಡರಾದ ಅನಂತ್, ಮಿರ್ಲೆ ನಂದೀಶ್, ಎಲ್ಐಸಿ ನಿಂಗಪ್ಪ, ಮಿರ್ಲೆ ರಾಜೀವ್, ಸಾಲಿಗ್ರಾಮ ಹೇಮಂತ್, ಗಾಯನಹಳ್ಳಿ ನಟರಾಜ್, ಮಂಜು, ರವಿ ಇತರರು ಇದ್ದರು.

RELATED ARTICLES
- Advertisment -
Google search engine

Most Popular