ಮಂಡ್ಯ: ಹೋದಕಡೆಯಲ್ಲೆಲ್ಲ ನನ್ನ ಕರ್ಮ ಭೂಮಿ ಅನ್ಕೊಂಡು ಬಂದಿದ್ದಾರೆ. ಜಾಗ ಬದಲಿಸಿ ಮತ್ತೆ ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ. ಸುಳ್ಳು ಭರವಸೆ ಕೊಡ್ತಾರೆ, ಮಂಡ್ಯ ಜಿಲ್ಲೆಗೆ ಶಾಶ್ವತ ಕೊಡುಗೆ ಕೊಟ್ಟಿದ್ದಾರಾ? ರೈತರ ಮಕ್ಕಳು ಅಂತಾರೆ ಏನಾದ್ರು ನಾಲೆ ಅಭಿವೃದ್ಧಿ ಮಾಡಿದ್ದಾರಾ? ಅನುಕಂಪ ಗಿಟ್ಟಿಸಿಕೊಳ್ಳಲು ಬೇಕಾದಾಗ ಬರ್ತಾರೆ. ಸಿಎಂ ಆಗಿದ್ದಾಗಲೇ ಅಭಿವೃದ್ಧಿ ಮಾಡದಿರುವವರು ಈಗ ಮಾಡ್ತಾರಾ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಶಾಸಕ ಕದಲೂರು ಉದಯ್ ವಾಗ್ದಾಳಿ ನಡೆಸಿದರು.
ಗೋರವನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸ್ಟಾರ್ ಚಂದ್ರು ಅವರನ್ನು ಅಭ್ಯರ್ಥಿ ಮಾಡಿದೆ. ಅವರ ಕುಟುಂಬದವರನ್ನೆ ಎಲ್ಲಾ ಕಡೆ ನಿಲ್ಲಿಸಿದ್ದಾರೆ. ಹಾಸನ, ಎಲ್ಲಾ ಕಡೆ ಹೋದರು ಅವರೇ ಆದ್ರೆ ಅಭಿವೃದ್ಧಿ ಮಾತ್ರ ಇಲ್ಲ. ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡ್ತಿದೆ. ಬೇರೆಯವರು ಬಂದರೆ ಅಭಿವೃದ್ಧಿ ಮಾಡಲು ಸಾಧ್ಯನ? ಯೋಚನೆ ಮಾಡಿ. ನಿಮ್ಮ ಕಷ್ಟಕ್ಕೆ ಭಾಗಿಯಾಗೋದು ನಾವು ಕುಮಾರಸ್ವಾಮಿ ಯಾವತ್ತಾದ್ರು ಕಷ್ಟ ಕೇಳಿದ್ದಾರಾ? ಸ್ಟಾರ್ ಚಂದ್ರು ಗೆಲ್ಲಿಸಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಹೇಳಿದರು.
ಸ್ಟಾರ್ ಚಂದ್ರುಗೆ ಹೆಚ್ಚು ಬಹುಮತವನ್ನು ಜನರು ಕೊಡ್ತಾರೆ. ಜನರಿಗೆ ವಿಶ್ವಾಸ ನಮ್ಮ ಸರ್ಕಾರದ ಮೇಲೆ ಇದೆ. ನನಗಿಂತ ಹೆಚ್ಚು ಮತ ಕೊಟ್ಟು ಆಶೀರ್ವಾದ ಮಾಡ್ತಾರೆ ಎಂದರು.
ನಾಳೆ ರಾಹುಲ್ ಗಾಂಧಿಯವರು ಸ್ವಾಗತಿಸಿಲು ಜನರು ಸಜ್ಜಾಗಿದ್ದಾರೆ. ನಾಳೆ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರ್ತಾರೆ. ಸ್ಟಾರ್ ಯಾವುದೇ ಕೆಟ್ಟ ಉದ್ದೇಶ ಇಟ್ಟಿಕೊಂಡು ರಾಜಕೀಯ ಮಾಡಲು ಬಂದಿಲ್ಲ. ಉದ್ಯಮದಲ್ಲಿ ದೊಡ್ಡ ಮಟ್ಟದಲ್ಕಿ ಬೆಳೆದು ಜನರ ಸೇವೆ ಮಾಡಲು ಬಂದಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ವಿಧಾನ ಸಭಾ ಚುನಾವಣೆ ಮುನ್ನ ಕೊಟ್ಟ ಭರವಸೆ ಈಡೇರಿಸಿದೆ. ಅಭಿವೃದ್ಧಿ ಕೆಲಸವನ್ನು ಮಾಡ್ತಿದೆ. ನಮ್ಮ ಸರ್ಕಾರ ಜಿಲ್ಲೆಗೆ ಹೆಚ್ಚು ಅಭಿವೃದ್ಧಿ ಯೋಜನೆ ಕೊಟ್ಟಿದೆ. ಮುಂದಿನ ದಿನಗಳಲ್ಲಿ 3 ಸಾವಿರ ಕೋಟಿ ಅನುದಾನ ಕೊಡ್ತಾರೆ. ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸಲು ಮುಂದಾಗಿದ್ದಾರೆ ಎಂದರು.
ಐದು ವರ್ಷಕ್ಕೊಮ್ಮೆ ಓಟ್ ಕೇಳಲು ಬಂದಿದ್ದಾರೆ ಜನರು ದಡ್ಡರಲ್ಲ. ಅವರು ಅಧಿಕಾರದಲ್ಲಿದ್ದಾಗ ಮಂಡ್ಯ ಜನ ಏನು ಅಂತ ತೋರಿಸಿದ್ದಾರೆ. 8 ಸಾವಿರ ಕೋಟಿ ಭರವಸೆ ಕೊಟ್ಟು ಜಿಲ್ಲೆಗೆ ಕೊಟ್ಟಿಲ್ಲ. ಏಳಕ್ಕೆ ಏಳು ಕೊಟ್ಟರು ಏನು ಅಭಿವೃದ್ಧಿ, ಯೋಜನೆ ಕೊಟ್ಟಿಲ್ಲ. ಮುಖ್ಯಮಂತ್ರಿಯಾಗಲು ಮೂಲ ಕಾರಣ ಮಂಡ್ಯ ಜನ. ಜನಕ್ಕೆ ಮೊಸ ಮಾಡಿ ಹೋಗಿ 5 ವರ್ಷ ಬಳಿಕ ಬಂದಿದ್ದಾರೆ. ಓಟ್ ಗಾಗಿ ಬಂದಿದ್ದಾರೆ, ಅವರ ಉದ್ದೇಶ ಯಾವುದೇ ಒಕ್ಕಲಿಗ ನಾಯಕರು ಬೆಳೆಯಬಾರದು ಅನ್ನೋದು ಎಲ್ಲಾ ಜಿಲ್ಲೆ ಆವರಿಸಿರಿಸಿಕೊಳ್ಳುವ ಕೆಟ್ಟ ಉದ್ದೇಶ ಇದೆ. ಜನ ಇದನ್ನ ಯಾರು ಒಪ್ಪಲ್ಲ ಎಂದರು.
ಮಹಿಳೆಯರ ಬಗ್ಗೆ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಇದಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ. ಮಹಿಳೆಯರಿಗೆ ಬಹಳಷ್ಟು ನೋವಾಗಿದೆ. ಅವರು ಸಹ ಅಕ್ಕತಂಗಿಯರ ಜೊತೆ ಹುಟ್ಟಿದ್ದಾರೆ ಇತರ ಹೇಳಿಕೆ ಕೊಡಬಾರದು. ಹೆಣ್ಣು ಮಕ್ಕಳು ಸಹಿಸಲ್ಲ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.