ಹುಣಸೂರು:ನಾಗಾಪುರ ಆಶ್ರಮಶಾಲೆ ಮತ್ತು ವೀರನಹೊಸಳ್ಳಿ ಆಶ್ರಮಶಾಲೆ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಜೆ.ಎಸ್.ಎಸ್ ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವಾಕ್ ಮತ್ತು ಶ್ರವಣ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಾಲ್ಲೂಕು ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಸಿ. ಬಸವರಾಜು ಉದ್ಘಾಟಿಸಿ ಮಾತನಾಡಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎನ್ ಶ್ರೀನಿವಾಸ್ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ರವರು ಆಸಕ್ತಿ ವಹಿಸಿ ನಮ್ಮ ತಾಲ್ಲೂಕಿನ ೫ ಆಶ್ರಮಶಾಲೆ ೧. ಬಾಲಕಿಯರ ವಿದ್ಯಾರ್ಥಿನಿಲಯದ ೨೫೦ ಮಕ್ಕಳಿಗೆ ತಪಾಸಣೆ ನಡೆಸಿ, ಉಚಿತವಾಗಿ ಔಷಧಿಯನ್ನು ವಿತರಿಸಿದ್ದಾರೆ.
ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಇದರಲ್ಲಿ ಕಿವಿ,ಮೂಗು, ಗಂಟಲು, ವಾಕ್ ಮತ್ತು ಶ್ರವಣ ಪರೀಕ್ಷೆ, ರಕ್ತ ಪರೀಕ್ಷೆ, ದಂತ ಪರೀಕ್ಷೆ, ಮಕ್ಕಳ ತಜ್ಞರು ಬಂದು ಮಕ್ಕಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಪ್ರತಿ ವರ್ಷ ಮಾಡಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದ ಅವರು ಚಿಕಿತ್ಸೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಮಹಾದೇವಪ್ಪ, ಡಾ. ಎಂ.ಡಿ. ಇಂದಿರಾ, ಡಾ. ರವೀಶ್ಗಣಿ, ಡಾ. ಸಾರಾನ್ಸ್, ಡಾ. ವಿಘ್ನೇಶ್, ಮುಖ್ಯ ಶಿಕ್ಷಕರಾದ ಸಿ.ಲಕ್ಷ್ಮಣ್, ಕೆ.ಎ.ಮೋಹನ್, ಶಿವಕುಮಾರ್, ಚೇತನ್ಕುಮಾರ್, ಸಣ್ಣಯ್ಯ ಹಾಗೂ ಆಶ್ರಮಶಾಲೆಯ ಶಿಕ್ಷಕರು ಹಾಜರಿದ್ದರು.