ವರದಿ: ವಿನಯ್ ದೊಡ್ಡಕೊಪ್ಪಲು
ಕೆ..ಆರ್.ನಗರ : ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನಲ್ಲಿ ಹೃದಯ ಸಂಬಂದಿ ರೋಗಿಗಳು ಹೆಚ್ಚಾಗುತ್ತಿದ್ದು ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯ ಬೇಕು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು.
ಕೆ.ಅರ್.ನಗರ ಪಟ್ಟಣದ ಶಿಕ್ಷಕರ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಶನಿವಾರ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಉಚಿತ ಹೃದ್ರೋಗ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ತಂಬಾಕು ಪದಾರ್ಥಗಳು ಮತ್ತು ಮದ್ಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಎದೆ ಉರಿತವಾದಾಗ ಎಸಿಡಿಟಿ ಎಂದುಕೊಂಡು ವೈದ್ಯರ ಬಳಿ ತೋರಿಸದೆ ಔಷಧಿ ತೆಗೆದುಕೊಳ್ಳುವುದು ಸರಿಯಲ್ಲ. ಪ್ರತಿ ದಿನ ಒಂದು ಗಂಟೆ ವಾಕಿಂಗ್ ಮತ್ತು ಯೋಗಾಸನ ಮಾಡಬೇಕು. ಆಹಾರದಲ್ಲಿಉಪ್ಪು ಕಡಿಮೆ ಉಪಯೋಗಿಸಬೇಕು ಹಾಗೂ ತರಕಾರಿ, ಹಣ್ಣು ಹೆಚ್ಚು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಹೃದಯ ಸಂಬಂಧಿ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುವ ಉದ್ದೇಶದಿಂದ ಆಯೋಜಿಸಲಾದ ಇಂತಹ ಶಿಬಿರಗಳು ‘ಹೃದಯ ವೈಶಲ್ಯ’ದ ಪ್ರಾಯೋಗಿಕ ಉಪಕ್ರಮಗಳಾಗಿವೆ. ಹೃದಯ ಸ್ತಂಭನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಆರೋಗ್ಯವನ್ನು ನಿರ್ಣಯಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ನಿತ್ಯ ಒತ್ತಡದ ನಡುವೆ ಕೆಲಸ ಮಾಡುವ ನೌಕರರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಾಗಿ ಗಮನಹರಿಸಬೇಕು ಎಂದರಲ್ಲದೆ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆ ಇರುವವರು ನಿಗದಿತವಾಗಿ ವೈದ್ಯರ ಸಲಹೆ ಪಡೆದು ಔಷದಿ ಮಾತ್ರೆಗಳನ್ನು ಸಕಾಲದಲ್ಲಿ ಪಡೆಯಿರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 400 ಮಂದಿ ಸರ್ಕಾರಿ ನೌಕರರಿಗೆ ಹೃದಯ ತಪಾಸಣೆ, ರಕ್ತದೊತ್ತಡ, ಸಕ್ಕರೆ, ಇಸಿಜಿ ಸೇರಿದಂತೆ ಇತರ ತಪಾಸಣೆ ಮಾಡಿ ಔಷದಿ ವಿತರಿಸಿ ಸೂಕ್ತ ಸಲಹೆ ನೀಡಲಾಯಿತು.

ಹೃದಯ ತಜ್ಞರಾದ ಡಾ. ಮುರಳಿದಾರರಾವ್, ಡಾ. ಭಾನುಮತಿ ಡಾ. ಮಂಜುನಾಥ್ ಡಾ. ಸಂತೋಷ್ ಕುಮಾರ್, ಡಾ. ರವಿಚಂದ್ರನ್, ಡಾ. ಅಂಬಿಕಾ ಡಾ. ನೇತ್ರೇಶ್, ಡಾ.ಮೋನಿಕಾ, ಡಾ.ಪ್ರಪುಲ್ಲ, ತಾಲೂಕು ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿಗಳಾದ ಜಿ.ಜೆ. ಮಹೇಶ್, ಸಿ.ಎಂ. ಅಣ್ಣಯ್ಯ, ಮಾಜಿ ಖಜಾಂಚಿ ಡಿ.ವಿ.ಗುಡಿ.ಪ್ರಸನ್ನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ಸಿ.ಎನ್.ಸ್ವಾಮಿ, ಮಾಜಿ ಅಧ್ಯಕ್ಷ ಬಿ.ವಿ.ಪ್ರಸನ್ನಕುಮಾರ್, ಶಂಕರೇಗೌಡ, ರಮೇಶ್, ಮಧು, ರಾಜಶೇಖರ್, ರಾಘವೇಂದ್ರ, ಬಿ.ಎಲ್. ಮಹದೇವ್, ಸಂತೋಷ್, ಮಂಜುನಾಥ್, ಗಂಗಾಧರ್, ಪೂರ್ಣಿಮಾ, ಜಯಶ್ರೀ, ಲೋಕೇಶ್, ರಘು, ಕುಮಾರ್, ಪ್ರದೀಪ್, ಸುಮಲತಾ, ಯೋಗೇಶ್, ಲಕ್ಷ್ಮೀಬಾಯಿ ಮತ್ತಿತರರು ಇದ್ದರು.
ಚಿತ್ರಶೀರ್ಷಿಕೆ : ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಉದ್ಘಾಟಿಸಿದರು.