ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಲ್ಲಿ ಮಳೆ ಅವಾಂತರ ಜೋರಾಗಿದೆ. ನಗರದ ಹೊರವಲಯದ ಮರವೂರು ಬಳಿ ಮನೆಗಳಿಗೆ ನೀರು ನುಗ್ಗಿದ್ದು ಮರವೂರಿನ ಮನೆಯೊಂದು ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಮನೆ ಒಳಗೆ ಹಾಗೂ ಹೊರಗೆ ನೀರು ನಿಂತು ಮನೆಕುಸಿದು ಬೀಳೋ ಆತಂಕ ಸೃಷ್ಟಿಯಾಗಿದೆ.
ನೆಲದಲ್ಲಿ ಮನೆಯ ಒಂದು ಭಾಗ ಹೂತು ಹೋಗಿದೆ. ಹೀಗಾಗಿ ಮನೆ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದ್ದುದರಿಂದ ಸದ್ಯ ಸಂಬಂಧಿಕರ ಮನೆಗೆ ಮನೆಯವರು ತೆರಳಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿತ್ತು.