ಬೆಂಗಳೂರು: ಮಂಗಳೂರಿನಲ್ಲಿ ಕಳೆದ 28 ವರ್ಷಗಳಿಂದ ವಾಲ್ಮೆನ್, ಪಂಪ್ ಆಪರೇಟರ್ಗಳಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 16 ಮಂದಿ ಕಾರ್ಮಿಕರ ಸೇವೆಯನ್ನು ತತ್ಕ್ಷಣ ಖಾಯಂಗೊಳಿಸಲು ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಆದೇಶ ನೀಡಿದೆ.
ಭಗವಾನ್ ದಾಸ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಅರ್ಜಿದಾರರ ಪರ ವಕೀಲ ಗೌತಮ್ದೇವ್ ವಾದ ಮಂಡಿಸಿದ್ದರು.
2019ರ ಡಿಸೆಂಬರ್ 12ರಂದು ಸೇವೆ ಮುಂದುವರಿಸದಂತೆ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶವನ್ನು ಹೈಕೋರ್ಟ್ ಭಾಗಶಃ ರದ್ದುಪಡಿಸಿ, ನ್ಯಾಯಾಲಯದ ಆದೇಶ ಸಿಕ್ಕ 60 ದಿನಗಳೊಳಗೆ ಖಾಯಂಗೊಳಿಸುವ ಸಂಬಂಧ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದೆ.
ಪಾಲಿಕೆ 2006ರಲ್ಲಿ ಗುತ್ತಿಗೆ ಸೇವೆ ರದ್ದುಪಡಿಸಿದ್ದರೂ, ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು.