ಬೆಂಗಳೂರು: “ತಮಿಳಿನಿಂದ ಕನ್ನಡ ಹುಟ್ಟಿದ ಭಾಷೆ” ಎಂಬ ವಿವಾದಾತ್ಮಕ ಹೇಳಿಕೆಯಿಂದ ರಾಜ್ಯದಲ್ಲಿ ಆಕ್ರೋಶದ ಭಾವನೆಗಳನ್ನು ಎದ್ದುಕೊಂಡ ನಟ ಕಮಲ್ ಹಾಸನ್ ಅವರು ಇದೀಗ ತಮ್ಮ ಹೊಸ ಚಿತ್ರ ‘ಥಗ್ಸ್ ಲೈಫ್’ ಬಿಡುಗಡೆಗೆ ಭದ್ರತೆ ಕೋರಿ ಹೈಕೋರ್ಟ್ಗೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಕಮಲ್ ಹಾಸನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಇದೀಗ ನಟ ಕಮಲ್ ಹಾಸನ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದೆ. “ನೀವು ಪಬ್ಲಿಕ್ ಫಿಗರ್. ನಿಮ್ಮ ಹೇಳಿಕೆಯಿಂದ ಜನರ ಭಾವನೆಗಳಿಗೆ ಆಘಾತವಾಗಿದೆ. ಆದರೆ ಕ್ಷಮೆ ಕೇಳದೆ ಇನ್ನೊಂದು ಕಡೆ ಚಿತ್ರ ಬಿಡುಗಡೆಗೆ ಭದ್ರತೆ ಕೇಳುತ್ತೀರಿ, ಇದು ತೀರಾ ಅಚಂಚಲ. ಮೊದಲು ಕ್ಷಮೆ ಕೇಳಿ, ನಂತರ ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ.” ಎಂದು ನ್ಯಾಯಪೀಠ ತಿಳಿಸಿದೆ.
ಅವರು ಮುಂದುವರೆದು, “ಈ ವಿವಾದದಿಂದ ನಾನು ಕೂಡ ಈ ಚಿತ್ರವನ್ನು ನೋಡಲು ಇಚ್ಛಿಸುತ್ತಿದ್ದೆ, ಆದರೆ ಸಾಧ್ಯವಾಗುತ್ತಿಲ್ಲ. ನೀವು ಈ ಪರಿಸ್ಥಿತಿ ಉಂಟುಮಾಡಿದ್ದೀರಿ. ಈಗ ಅದಕ್ಕಾಗಿಯೇ ಸರ್ಕಾರದಿಂದ ಭದ್ರತೆ ಕೇಳುತ್ತೀರಿ. ಇದು ನ್ಯಾಯಸಂಗತವಲ್ಲ,” ಎಂದು ಕಮಲ್ ಹಾಸನ್ರನ್ನು ಖಂಡಿಸಿದರು.
‘300 ಕೋಟಿ ವೆಚ್ಚದ ಸಿನಿಮಾ’ ಎಂದು ಹೇಳಿಕೊಳ್ಳುವವರಾದರೆ, ಇತರರ ಭಾವನೆಗಳಿಗೆ ಗೌರವ ನೀಡುವುದು ಮುಖ್ಯ. ನೀವು ನಿಮ್ಮ ಹೇಳಿಕೆಯನ್ನು ನಿರಾಕರಿಸಿಲ್ಲ, ಅಂದರೆ ನೀವು ಒಪ್ಪಿಕೊಂಡಂತೆ. ಇದು ಸಾರ್ವಜನಿಕ ಜೀವನದ ಹೊಣೆಗಾರಿಕೆಯ ಪ್ರಶ್ನೆ ಎಂದು ನ್ಯಾಯಪೀಠ ತೀರಾ ಕಠಿಣವಾಗಿ ಹೇಳಿದೆ.