Saturday, June 28, 2025
Google search engine

Homeರಾಜ್ಯಸುದ್ದಿಜಾಲಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ: ದೊಡ್ಡಸ್ವಾಮೇಗೌಡ

ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ: ದೊಡ್ಡಸ್ವಾಮೇಗೌಡ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ನಾನು‌ ಕೂಡ ಆಕಾಂಕ್ಷಿ ಆಗಿದ್ದರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದು ಕೊಳ್ಳುವ ತೀರ್ಮಾನಕ್ಕೆ‌ ಬಿಟ್ಟ ವಿಚಾರವಾಗಿದೆ ಇದು ಎಂದು ಎಂಸಿಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.

ಕೆ.ಆರ್.ನಗರ ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದ ತಮ್ಮ ನಿವಾಸದಲ್ಲಿ ಚಿಕ್ಕಕೊಪ್ಪಲು ಗ್ರಾಮದ ಸಿ.ಪಿ.ಮನುಗೌಡ ಸ್ನೇಹ ಬಳಗದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಅವರು ತಮ್ಮ‌ 5 ವರ್ಷಗಳ ಅವಧಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೆ ಅವುಗಳ ಏಳಿಗೆಗೆ ಶ್ರಮಿಸುತ್ತೇನೆ ಜತಗೆ ರೈತರ ಹಿತ ಕಾಯುವೆ ಎಂದರು.

ಸಹಕಾರ ಸಂಘಗಳು ರೈತರ ಬ್ಯಾಂಕ್ ಗಳಾಗಿದ್ದು ಇವುಗಳಿಗೆ ಜಿಲ್ಲಾ ಸಂಘದಿಂದ ವಿವಿಧ ಬೆಳೆಸಾಲವನ್ನು ಸಕಾಲದಲ್ಲಿ ವಿತರಣೆ ಮಾಡಲು ಕ್ರಮ ಕೈಗೊಂಡು ರೈತರಿಗೆ ಬಡ್ಡಿ ಇಲ್ಲದೇ ನೀಡುತ್ತಿರುವ ಸಾಲದ ಮೊತ್ತ 5 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.

ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ‌ ಕೃಷಿ ಪತ್ತಿನ ಸಹಕಾರ ಸಂಘದ ಷೇರುದಾರು ರೈತರು‌ ಸಂಘದಲ್ಲಿ ಸಾಲ ಸೇರಿದಂತೆ ಏನೆ ಸಮಸ್ಯೆಗಳಿದ್ದರೇ ಅವುಗಳನ್ನು ತಮ್ಮ ಗಮನಕ್ಕೆ ತಂದರೆ ಅವುಗಳನ್ನು‌ ನಿವಾರಣೆಗೆ ತ್ವರಿತವಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೇಸ್ ಮುಖಂಡ ಚಿಕ್ಕಕೊಪ್ಪಲು ಸಿ.ಪಿ.ಮನುಗೌಡ, ಎಳನೀರು ಉದ್ಯಮಿಗಳಾದ ಕುಪ್ಪೆ ಕುಮಾರ್, ವಡ್ಡರಕೊಪ್ಪಲು ಗಾಂಧಿ ಸ್ನೇಹ ಬಗಳದ ಲಕ್ಷ್ಮಿಪುರ ಶರತ್ ಸೇರಿದಂತೆ ಮತ್ತಿತರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದಲು ದೊಡ್ಡಸ್ವಾಮೇಗೌಡ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ವೈ.ಎಸ್.ನಟರಾಜು, ಉಪಾಧ್ಯಕ್ಷ ಶಂಕರನಾಯಕ, ನಿರ್ದೇಶಕರಾದ ಸಿ.ವೈ.ಅಭಿಲಾಷ್, ಚಲುವಯ್ಯ, ಸಿ.ಆರ್.ರಘುನಾಥ್, ತಮ್ಮೇಗೌಡ, ಸಿ.ಹೆಚ್.ಕುಮಾರ್, ಪುಟ್ಟೇಗೌಡ, ರೂಪ, ಉಷಾ, ಸಿ.ಕೆ.ಮಲ್ಲಿಕಾರ್ಜುನ, ಸೈಯದ್‌ಇಸ್ರಾರ್, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಎನ್.ದಿನೇಶ್ ಇದ್ದರು.

RELATED ARTICLES
- Advertisment -
Google search engine

Most Popular