Tuesday, June 24, 2025
Google search engine

Homeಸ್ಥಳೀಯಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ : ಶಾಸಕ ಟಿ ಎಸ್ ಶ್ರೀವತ್ಸ

ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ : ಶಾಸಕ ಟಿ ಎಸ್ ಶ್ರೀವತ್ಸ

ಮೈಸೂರು: ೧೦ತಳಿಯ ೩೦ ಶ್ವಾನ ಪ್ರದರ್ಶನ

ಮೈಸೂರು :ಸಿದ್ದಾರ್ಥ ಲೇಔಟ್ ನಲ್ಲಿರುವ ವೈಶಾಲಿ ಕಾನ್ವೆಂಟ್ ಮೈದಾನದಲ್ಲಿ ಮಲೆ ಮಾದೇಶ್ವರ ಸಂಸ್ಥೆ ಹಾಗೂ ಇನ್ನರ್ ವೀಲ್ ಗೋಲ್ಡ್ ಸಂಸ್ಥೆಯ ಸಹಯೋಗದೊಂದಿಗೆ ವಿವಿಧ ತಳಿಯ ಶ್ವಾನ ಪ್ರದರ್ಶನದಲ್ಲಿ ೧೦ತಳಿಯ ೩೦ ಶ್ವಾನ ಪಾಲ್ಗೊಂಡು ಗಮನ ಸೆಳೆದವು, ರಾಟ್ ವೀಲರ್ ಶ್ವಾನ ಪ್ರಥಮ ಬಹುಮಾನ ದೊರೆಯಿತು, ಹಸ್ಕಿ ತಳಿಗೆ ದ್ವಿತೀಯ ಬಹುಮಾನ, ಪಿಟ್ ಬುಲ್ ತೃತೀಯ ಬಹುಮಾನ ಲಭಿಸಿತು ಈ ಶ್ವಾನಗಳ ಮಾಲೀಕರಿಗೆ ಶಾಸಕ ಟಿ ಎಸ್ ಶ್ರೀವತ್ಸ ಬಹುಮಾನ ವಿತರಿಸಿದರು, ಭಾಗವಹಿಸಿದ ಇತರೆ ಶ್ವಾನ ಗಳ ಮಾಲೀಕರಿಗೆ ಪ್ರಶಂಸನಾ ಪತ್ರ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ ಎಸ್ ಶ್ರೀವತ್ಸ ನಿಯತ್ತಿನ ಪ್ರಾಣಿಯೊಂದಿದ್ದರೆ ಅದು ಶ್ವಾನ. ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ, ನಗರದ ಕೆಲವು ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚಾಗಿರುವುದರಿಂದ ಶ್ವಾನಗಳ ಅವಶ್ಯಕತೆಯಿದೆ. ಶ್ವಾನ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದರಿಂದಲೇ ಜನರು ಶ್ವಾನ ಸಾಕುವುದು ರೂಢಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ ಶ್ರೀನಾಥ್ ಬಾಬು, ನಟಿ ಸ್ಮಿತಾ, ಮಲೆ ಮಾದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಮಹಾನ್ ಅಚ್ಚು, ರವೀಂದ್ರ, ಪ್ರತಿಭಾ,ಆಲೂಕ್ ಜೈನ್, ಇನ್ನರ್ ವಿಲ್ ಕ್ಲಬ್ ಗೋಲ್ಡ್ ಅಧ್ಯಕ್ಷರಾದ ಪ್ರೇಮಾ ರವಿ, ಉಪಾಧ್ಯಕ್ಷರಾದ ಪ್ರತಿಭಾ, ಕಾರ್ಯದರ್ಶಿ ಅಂಶು ಅಗರ್ವಾಲ್ , ಶೀಲ, ಅಂಜಲಿ, ಚೇತನ್, ಜಿ ರಾಘವೇಂದ್ರ, ಆರ್ ಜೆ ಅವಿನಾಶ್, ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular