ಗಂಗಾವತಿ: ಗಂಗಾವತಿಯ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾದ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಆರೋಪಿಗಳಾದ ಅಲಿ ಖಾನ್, ಬಿ.ಬಿ. ಶ್ರೀನಿವಾಸರೆಡ್ಡಿ ಮತ್ತು ರಾಜಗೋಪಾಲರೆಡ್ಡಿಗೂ ಜಾಮೀನು ದೊರಕಿದ್ದು, ಸಿಬಿಐ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ತಡೆಹಿಡಿದಿದೆ.
ಜನಾರ್ಧನ ರೆಡ್ಡಿಗೆ ದೇಶ ತೊರೆಯದಂತೆ ಸೂಚನೆಯಿದ್ದು, ₹10 ಲಕ್ಷ ಬಾಂಡ್ ನೀಡುವಂತೆ ಷರತ್ತು ವಿಧಿಸಲಾಗಿದೆ. ಹೈದರಾಬಾದ್ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಮೇ 6ರಂದು ಶಿಕ್ಷೆ ವಿಧಿಸಿತ್ತು.