ಮಂಗಳೂರು (ದಕ್ಷಿಣ ಕನ್ನಡ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೋಜನೆ, ಸಾಧನೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನೆ ಮನಗಳಿಗೆ ತಲುಪಿಸುವ ಉದ್ದೇಶ ದೊಂದಿಗೆ ಉದಯಿಸಿರುವ ಮೋದಿ ಬ್ರಿಗೇಡ್ ನ ಉದ್ಘಾಟನೆ ಜ.21ರಂದು ಬೆಳಗ್ಗೆ 10:30ಕ್ಕೆ ಟಿ.ವಿ.ರಮಣ ಪೈ ಕನ್ವೆನ್ಸನ್ ಸೆಂಟರ್ ನಲ್ಲಿ ನಡೆಯಲಿದೆ.
ಈ ಕುರಿತು ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ಬ್ರಿಗೇಡ್ನ ಅಧ್ಯಕ್ಷ ಪದ್ಮರಾಜ್ ರೋಹಿತ್ ನಗರ, ಇದೊಂದು ರಾಜಕೀಯ ರಹಿತ ಹಿಂದೂ ಸಂಘಟನೆಯಾಗಿದೆ. ಇದರಲ್ಲಿ ರಾಜಕೀಯ ಪಕ್ಷದ ಸದಸ್ಯರು ಇಲ್ಲ ಎಂದರು.
ಸಂಚಾಲಕ ಶಿವಪ್ರಸಾದ್ ಮುಡಿಪು, ಗೌರವಾಧ್ಯಕ್ಷ ದಿನೇಶ್ ಕೆ. ಉರ್ವ, ಪ್ರಧಾನ ಕಾರ್ಯದರ್ಶಿ ರವಿ ಕಾವೂರು, ಸದಸ್ಯ ಧೀರಜ್ ಕಲ್ಲಡ್ಕ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.