ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಅಮರಾವತಿ ಹೋಟೆಲ್ ನಲ್ಲಿ ನಡೆಯುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣಾ ಎಸ್ಪಿ-ಎಸ್ಟಿ ಮೋರ್ಚ ಸಭೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗಮಿಸಿದ್ದಾರೆ.
ಎಸ್ಸಿ, ಎಸ್ಟಿ ಮತಬೇಟೆಗೆ ಜೆಡಿಎಸ್-ಬಿಜೆಪಿ ನಾಯಕರು ಇಳಿದಿದ್ದು, ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಆರ್.ಅಶೋಕ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗಿಯಾದ ಮೈಸೂರು ಸಂಸದ ಪ್ರತಾಪ್ ಸಿಂಹ, ಹನುಮಂತಪ್ಪ, ರಾಮಚಂದ್ರು, ಮುನಿರಾಜು, ಸಚ್ಚಿದಾನಂದ, ಅಶೋಕ್ ಜಯರಾಮ್, ಕೆ.ಟಿ.ಶ್ರೀಕಂಠೇಗೌಡ, ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಸಭೆಯಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ಮಾತನಾಡಿ, ದೇವೇಗೌಡ್ರು ಕೊಟ್ಟ ರಾಜಕೀಯ ಭಿಕ್ಷೆಯಿಂದ ನಾಯಕರಾಗಿದ್ದಾರೆ. ಅವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡ್ತಾರೆ. ಆದಿ ಚುಂಚನಗಿರಿ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದೇವೆ ಎಂದ ಅವರು, ಸಚಿವ ಚಲುವರಾಯಸ್ವಾಮಿ ವಿರುದ್ಧ ಮಹಾಭಾರತದ ಕಥೆ ಹೇಳಿದರು.
ಆದಿ ಚುಂಚನಗಿರಿ ಮಠ ಒಡೆದಿದ್ದು ಯಾರು? ಕಾಲಭೈರವನ ಮೇಲೆ ಪ್ರಮಾಣ ಮಾಡೋದ ಬಾ. ಪುಂಡಾಟಿಕೆ ಮಾತನಾಡಿದ್ರೆ ಕೆರಗೋಡು ಮಾತ್ರ ಅಲ್ಲ ಜಿಲ್ಲೆಯಲ್ಲಿ ಅಡ್ಡ ಹಾಕ್ತಾರೆ. ಕಾಲು ಹಿಡಿದುಕೊಂಡು ದೇವೇಗೌಡರನ್ನು ಪ್ರಧಾನ ಮಂತ್ರಿ ಮಾಡಿದ್ರಿ. ಪ್ರಮಾಣ ವಚನ ತೆಗೆದುಕೊಂಡ ಬಳಿಕ ಮುಳ್ಳಿನ ಹಾಸಿಗೆ ಮೇಲೆ ಮಲಗಿಸಿದ್ರಿ. ಕುಮಾರಸ್ವಾಮಿ ಮೇಲೆ ದೌರ್ಜನ್ಯ ನಡೆಸಿದ್ರಿ. ಅಯೋಗ್ಯರು ತುಂಬಿರುವ ಪಕ್ಷದಲ್ಲಿ ಪಾಠ ಕಲಿಬೇಕಾ? ಬಿಜೆಪಿಯವರ ನೋಡಿ ಕಲಿತಿಕೊ. ಕುಮಾರಸ್ವಾಮಿ ಬಗ್ಗೆ ಮಾತನಾಡಿದ್ರೆ ಎಚ್ಚರಿಕೆ ಎಂದು ತಿರುಗೇಟು ನೀಡಿದರು.
ಸಧೃಡವಾಗಿರಬೇಕು ಅಂತ ಮೋದಿ ಶ್ರಮಿಸುತ್ತಿದ್ದಾರೆ. ನರೇಂದ್ರ ಮೋದಿ ಜೊತೆ ಕೈ ಜೋಡಿಸಿ ಕಾವೇರಿ ಸಮಸ್ಯೆಗಳನ್ನು ಪರಿಹರಿಸಲು ನಿರ್ಧಾರ ಮಾಡಲಾಗಿದೆ. ಸ್ಟಾಲಿನ್ ಒಲಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಟ್ಟಿದ್ದಿರಿ. ಗದ್ದೆಗಳು ಗೆದ್ದಿಲು ಹಿಡಿಯುತ್ತಿದೆ. ಇರುವ ನೀರನ್ನು ಬಿಟ್ಟು ಜಿಲ್ಲಾ ಮಂತ್ರಿಯಾಗಿ ರೈತರಿಗೆ ಅನ್ಯಾಯ ಮಾಡಿದ್ದೀರಿ. ಮಂಡ್ಯ ಜಿಲ್ಲೆಯ ಜನರ ಕಬ್ಬು ಚೆನ್ನಾಗಿರಲು 300 ಕೋಟಿ ಅಪ್ರುವಲ್ ಮಾಡಿದ್ರು ಎಂದರು.
ಯಡಿಯೂರಪ್ಪ, ಕುಮಾರಣ್ಣ, ಒಂದಾಗಿ ಹೋಗಬೇಕು. ಈ ದೇಶ ಅಭಿವೃದ್ಧಿಯತ್ತ ಸಾಗಬೇಕು. ಭಾರತ ನಡೆಸಲು ಮೋದಿ ಬೇಕು. ಕುಮಾರಣ್ಣ ಪ್ರಚಂಡ ಬಹುಮತದಿಂದ ಗೆಲ್ಲಬೇಕು. ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ದೇಶಭಕ್ತಿ ಬಗ್ಗೆ ಹೇಳಿಕೊಡುವ ಅಗತ್ಯ ಇಲ್ಲ. ಒಟ್ಟಾಗಿ ಕೆಲಸ ಮಾಡಿ ಮೈತ್ರಿ ಅಭ್ಯರ್ಥಿ ಗೆಲ್ಲಿಸೋಣ ಎಂದು ಹೇಳಿದರು.