Friday, May 30, 2025
Google search engine

Homeರಾಜ್ಯಕೆರಗೋಡು ವಿವಾದದ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ

ಕೆರಗೋಡು ವಿವಾದದ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ

ಮಂಡ್ಯ: ಕೆರಗೋಡು ಗ್ರಾಮದಲ್ಲಿ ನಡೆದ ಘಟನೆಯ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು. ಯಾರು ಬಂದ್ ಮಾಡುವುದು ಬೇಡಾ. ಬಿಜೆಪಿ-ಜೆಡಿಎಸ್ ಬಂದ್ ಮಾಡಬಾರದು, ನಾವು ಬಂದ್ ಮಾಡಲ್ಲ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೌಹಾರ್ದತೆ ಹಾಳು ಮಾಡಲು ಹೊರಗಿನಿಂದ ಬಂದಿದ್ದಾರೆ. ರಾಷ್ಟ್ರ ಧ್ವಜದ ಬದಲು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಗ್ರಾ.ಪಂ. ಎಲ್ಲಾ ಅಧಿಕಾರ ವಿರುದ್ಧ ಕ್ತಮಕ್ಕೆ ಮುಖಂಡ ಕೃಷ್ಣೇಗೌಡ ಆಗ್ರಹಿಸಿದರು.

ಸಾರ್ವಜನಿಕ ಜಾಗದಲ್ಲಿ ಕೆಲವು ಬಾವುಟಗಳು ಹಾರಾಡುತ್ತಿವೆ. ಸಾರ್ವಜನಿಕ ಸ್ಥಳದಲ್ಲಿ ಒಂದು ಧರ್ಮದ ಧ್ವಜ ಹಾರುವುದು ಸರಿಯಲ್ಲ. ಇದರ ಬಗ್ಗೆ  ಜವಾಬ್ದಾರಿ ಅಧಿಕಾರಿಗಳು ಸಭೆ ನಡೆಸಿ ಧ್ವಜ ತೆಗೆಸುವ ಕೆಲಸ ಮಾಡಬೇಕು‌ ಎಂದರು.

ಕೆರಗೋಡು ಗ್ರಾಮದ ಗಲಾಟೆ ಹಿಂದು-ಮುಸ್ಲಿಂ ಗಲಾಟೆಯಲ್ಲ. ಸಿಟಿ ರವಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡ್ತಿದ್ದಿರಿ. ಹಿಂದು ಯುವಕರ ಜೊತೆ ಇಟ್ಟುಕೊಂಡು ರಾಜಕೀಯ ಮಾಡ್ತಿದ್ದಿರಾ. ಮಂಡ್ಯ ಜಿಲ್ಲೆಯಲ್ಲಿ ಬರದ ಸಮಸ್ಯೆ ಇದೆ ಹೋರಾಟ ಮಾಡಿ ಎಂದು ಒತ್ತಾಯಿಸಿದರು.

ಪುಂಡಾಟಿಕೆ ಮಾಡಿದವರ ವಿರುದ್ದ ನಮ್ಮ ಹೋರಾಟ. ಎಂಎಲ್ ಎ ತಪ್ಪು ಮಾಡಿದ್ರೆ ಅವರನ್ನು ಸಹ ಖಂಡಿಸುತ್ತೇವೆ. ಬಿಜೆಪಿಯವರು ಮೊಕ್ಕಾಂ ಹೂಡಿ ರಾಜಕಾರಣ ಮಾಡ್ತಿದೆ. ಮಂಡ್ಯ ಜಿಲ್ಲೆಗೆ ಅನ್ಯಾಯವಾಗದ ಹೋರಾಟ  ಮಾಡ್ತಿದ್ದೇವೆ. ಕರಾವಳಿ ರೀತಿ ಮಂಡ್ಯ ಮಾಡಲು ಹೋಗಿದ್ದಾರೆ. ಕೋಮು ಗಲಭೆ ಉಂಟಾದ್ರೆ ಸಾಕಷ್ಟು ನಷ್ಟವಾಗುತ್ತೆ. ಆಗಾಗಿ ಈ ರೀತಿಯ ಹೋರಾಟ. ಫೆ.9 ರಂದು ಬಂದ್ ಕರೆ ಕೊಟ್ಟಿದ್ದಾರೆ ಅವರಿಗೂ ತಿಳಿ ಹೇಳುವ ಕೆಲಸ ಮಾಡಿ. ಶಾಂತಿ ಸೌಹಾರ್ದ ನೆಲೆಸಲು ಅವಕಾಶ ಮಾಡಿಕೊಡಿ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular