ಬೆಂಗಳೂರು: ಹದಿನೆಂಟನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯು ಅಂತಿಮ ಹಂತ ತಲುಪಿದ್ದು, ಮಂಗಳವಾರ ನಡೆಯಲಿರುವ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತಲೆದೋರುತ್ತಿವೆ.
ಇದು ಆರ್ಸಿಬಿ ತಂಡದ ನಾಲ್ಕನೇ ಫೈನಲ್ ಆಗಿದ್ದು, 2009, 2011 ಹಾಗೂ 2016ರ ಫೈನಲ್ಗಳಲ್ಲಿ ತಂಡ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಈ ಬಾರಿ ಆರ್ಸಿಬಿ ಟ್ರೋಫಿ ಗೆಲ್ಲಲಿ ಎಂಬುದು ಲಕ್ಷಾಂತರ ಅಭಿಮಾನಿಗಳ ಹಾರೈಕೆ.
ಫೈನಲ್ಗಾಗಿ ಸಜ್ಜಾಗಿರುವ ಆರ್ಸಿಬಿ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು, “ಆರ್ಸಿಬಿ ತಂಡ ಸೋಲು-ಗೆಲುವಿನಲ್ಲೂ ಸದಾ ಜೊತೆಗಿರುವ ಅಭಿಮಾನಿಗಳಿಗಾಗಿ ಈ ಬಾರಿ ಕಪ್ ಗೆಲ್ಲಲಿ” ಎಂದು ಹಾರೈಸಿದ್ದಾರೆ.
“ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ,” ಎಂದು ಅವರು ಬರೆಯುತ್ತಾ, ಈ ಬಾರಿಗೆ ಆ ಸಿಹಿ ಕನ್ನಡಿಗರು ಮತ್ತು ಜಗತ್ತಿನಾದ್ಯಂತ ಇರುವ ಆರ್ಸಿಬಿ ಅಭಿಮಾನಿಗಳ ಪಾಲಾಗಲಿ ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.