ಮೈಸೂರು: ದಸರಾ ಸಂಭ್ರಮ ಮಹೋತ್ಸವದ ನಡುವೆ ಮೈಸೂರಿನಲ್ಲಿ ವರುಣ ಎಂಟ್ರಿ ಕೊಟ್ಟಿದ್ದಾನೆ. ಮಳೆ ನಡುವೆಯೂ ಜನರು ಉತ್ಸಾಹದಿಂದ ದಸರಾ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಂದು ಜಂಬೂ ಸವಾರಿ ಕಣ್ತುಂಬಿಕೊಳ್ಳುವ ಸಲುವಾಗಿ ಮೈಸೂರು ಅರಮನೆಯ ಸುತ್ತಲೂ ಕಿಕ್ಕಿರಿದು ಜನ ಸೇರಿದ್ದಾರೆ. ಈ ವೇಳೆ ಮಳೆರಾಯ ಕೂಡ ಕೃಪೆ ತೋರಿದ್ದಾನೆ. ಮಳೆ ನಡುವೆಯೇ ಮೆರವಣಿಗೆ ಸಾಗುತ್ತಿದೆ. ಜಾನಪದ ಕಲಾ ತಂಡಗಳು, ಟ್ಯಾಬ್ಲೋಗಳು ಮಳೆಯಲ್ಲೇ ಮುಂದೆ ಸಾಗುತ್ತಿವೆ. ದಸರಾ ವೀಕ್ಷಣೆಗೆಂದು ಆಗಮಿಸಿರುವ ಜನರು ಸಹ ಮಳೆಯಲ್ಲೇ ಮೆರವಣಿಗೆ ವೀಕ್ಷಿಸುತ್ತಿದ್ದಾರೆ.