Wednesday, May 21, 2025
Google search engine

Homeಅಪರಾಧಬೆಂಗಳೂರಿನಲ್ಲಿ ೯ ಚಿನ್ನಾಭರಣ ಮಳಿಗೆ ಮೇಲೆ ಐಟಿ ದಾಳಿ

ಬೆಂಗಳೂರಿನಲ್ಲಿ ೯ ಚಿನ್ನಾಭರಣ ಮಳಿಗೆ ಮೇಲೆ ಐಟಿ ದಾಳಿ

ಬೆಂಗಳೂರು: ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ ಶೋಧ ಮಾಡುತ್ತಿದೆ. ಇದೀಗ ಆಭೂಷಣ ಚಿನ್ನದ ಅಂಗಡಿಯ ಮಾಲೀಕನ ಅಪಾರ್ಟ್ಮೆಂಟ್ ನಲ್ಲಿ ಐಟಿ ಶೋಧ ನಡೆಸುತ್ತಿತ್ತು. ಮೂರು ದಿನಗಳ ಶೋಧದ ನಂತರ ಇಂದು ಶನಿವಾರ ಐಟಿ ದಾಳಿ ಅಂತ್ಯವಾಗಿದೆ.

ಐಟಿ ಅಧಿಕಾರಿಗಳು ಜಯನಗರ ೩ನೇ ಬ್ಲಾಕ್‌ನ ೮ನೇ ಮುಖ್ಯರಸ್ತೆಯಲ್ಲಿರುವ ಆಭೂಷಣ ಮಳಿಗೆ, ಪೊಲ್ಕಿಸ್, ಮಂಗಳ, ರಿದ್ದಿ, ತಿರುಮಲ ಸೇರಿದಂತೆ ೯ ಮಳಿಗೆ ಮೇಲೆ ದಾಳಿ ನಡೆಸಿದ್ದರು. ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ ಶೋಧ ಮಾಡುತ್ತಿದೆ.

ಜಯನಗರ ೨ನೇ ಬ್ಲಾಕ್‌ನಲ್ಲಿರುವ ಆಭೂಷಣ ಮಳಿಗೆ ಮಾಲೀಕನ ಫ್ಲ್ಯಾಟ್ ಮೇಲೂ ಐಟಿ ದಾಳಿ ನಡೆದಿತ್ತು. ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಸದ್ಯ ಮೂರು ದಿನಗಳ ಪರಿಶೀಲನೆ ತಡ ರಾತ್ರಿ ೨ಗಂಟೆಗೆ ಅಂತ್ಯವಾಗಿದೆ.
ದಾಳಿ ವೇಳೆ, ಹಲವು ಮಹತ್ವದ ದಾಖಲೆಗಳು, ರಶೀದಿ ಇನ್ ವಾಯ್ಸ್ ಪರಿಶೀಲಿಸಲಾಗಿದೆ. ಆದಾಯ ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ ಶೋಧ ಮಾಡುತ್ತಿದೆ. ಮೂರು ದಿನಗಳ ಶೋಧದ ನಂತರ ಇಂದು ಐಟಿ ದಾಳಿ ಅಂತ್ಯವಾಗಿದೆ.

RELATED ARTICLES
- Advertisment -
Google search engine

Most Popular