Friday, June 20, 2025
Google search engine

Homeರಾಜ್ಯಜಾರ್ಖಂಡ್ ಚುನಾವಣೆ - ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಜಾರ್ಖಂಡ್ ಚುನಾವಣೆ – ಬಿಜೆಪಿ ಪ್ರಣಾಳಿಕೆ ಬಿಡುಗಡೆ

ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಂಚಿಯಲ್ಲಿ ಇಂದು ಭಾನುವಾರ ಬಿಡುಗಡೆ ಮಾಡಿದರು.

ರಾಂಚಿಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಶಾ, ನಾವು ಇಂದು ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ, ಭಾರತೀಯ ಜನತಾ ಪಕ್ಷವು ಎಲ್ಲಾ ಪಕ್ಷಗಳಿಗಿಂತ ಭಿನ್ನವಾಗಿದೆ. ಏಕೆಂದರೆ ದೇಶದ ರಾಜಕೀಯದಲ್ಲಿ ಭರವಸೆ ಪೂರೈಸುವ ಏಕೈಕ ಪಕ್ಷವಾಗಿದೆ, ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಾಗಲೆಲ್ಲಾ ನಾವು ಎಲ್ಲಾ ನಿರ್ಣಯಗಳನ್ನು ಪೂರೈಸಿದ್ದೇವೆ ಮತ್ತು ಆದ್ದರಿಂದಲೇ ಜಾರ್ಖಂಡ್‌ನ ಜನರು, ವಿಶೇಷವಾಗಿ ಹಿಂದುಳಿದ ವರ್ಗಗಳು, ಬಡವರು, ಆದಿವಾಸಿಗಳು, ದಲಿತರು ನಮ್ಮ ಕಡೆಗೆ ನೋಡುತ್ತಿದ್ದಾರೆ. ದೊಡ್ಡ ಭರವಸೆಯೊಂದಿಗೆ ಸಂಕಲ್ಪ ಪತ್ರ ಬಿಡುಗಡೆ ಮಾಡುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ , ಸಂಜಯ್ ಸೇಠ್ ಮತ್ತು ಬಿಜೆಪಿ ಜಾರ್ಖಂಡ್ ಅಧ್ಯಕ್ಷ ಬಾಬುಲಾಲ್ ಮರಾಂಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular