Wednesday, June 4, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ಆರೋಗ್ಯ ಸೇವೆಯಲ್ಲಿ ನೂತನ ಹೆಜ್ಜೆ - ನಮ್ಮ ಕ್ಲಿನಿಕ್ ಉದ್ಘಾಟನೆ

ಕೆ.ಆರ್.ನಗರ: ಆರೋಗ್ಯ ಸೇವೆಯಲ್ಲಿ ನೂತನ ಹೆಜ್ಜೆ – ನಮ್ಮ ಕ್ಲಿನಿಕ್ ಉದ್ಘಾಟನೆ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ದೇಶ ಮತ್ತು ರಾಜ್ಯಗಳು ಅಭಿವೃದ್ಧಿಗೆ ಪಥದತ್ತ ಸಾಗಲು ಶಿಕ್ಷಣದ ಜತೆಗೆ ಜನರ ಆರೋಗ್ಯದ ಸ್ಥಿತಿಯೂ ಅತ್ಯಂತ ಪ್ರಮುಖವಾದುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ 7 ನೇ ವಾರ್ಡಿನಲ್ಲಿ ಸೋಮವಾರದಿಂದ ಕಾರ್ಯಾರಂಭ ಮಾಡಿದ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಸೂಕ್ಷ್ಮ ವಿಚಾರಗಳನ್ನು ಅರಿತಿರುವ ರಾಜ್ಯ ಸರ್ಕಾರ ಆ ದಿಸೆಯಲ್ಲಿ ಕಟಿಬದ್ದವಾಗಿ ಕೆಲಸ ಮಾಡುತ್ತಿದೆ ಎಂದರು.

ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ನಮ್ಮ ಕ್ಲಿನಿಕ್ ಆರಂಬಿಸಿದ್ದು ಈ ಹಿಂದೆ ಈಶ್ವರ ನಗರದಲ್ಲಿ ಕ್ಲಿನಿಕ್ ತೆರೆಯಲಾಗಿತ್ತು ಈಗ ಇಲ್ಲಿಯೂ ಕಾರ್ಯಾರಂಭ ಮಾಡಿದ್ದು ಈ ಬಾಗದ ವಾರ್ಡುಗಳ ಜನತೆ ಸದುಪಯೋಗ ಮಾಡಿಕೊಳ್ಳಬೇಕೆಂದರು.

ನಮ್ಮ ಕ್ಲಿನಿಕ್ ಗಳಲ್ಲಿ ಪ್ರಮುಖವಾಗಿ 12 ಸೇವೆಗಳು ದೊರೆಯಲಿದ್ದು ಇದರಿಂದ ದೂರದ ಆಸ್ಪತ್ರೆಗಳಿಗೆ ತೆರಳುವುದು ತಪ್ಪಿ ಸಮಯ ಉಳಿಯುವುದರೊಂದಿಗೆ ತ್ವರಿತ ಚಿಕಿತ್ಸೆ ಸಿಗಲಿದೆ ಎಂದು ತಿಳಿಸಿದ ಅವರುಮುಂದಿನ ದಿನಗಳಲ್ಲಿ ಕ್ಲಿನಿಕ್ ಆವರಣದಲ್ಲಿ ವಾರಕ್ಕೆ ಎರಡು ಬಾರಿ ಯೋಗಾಸನ ಶಿಬಿರ ನಡೆಸಲಿದ್ದು ಇಲ್ಲಿಗೆ ಅಗತ್ಯವಿರುವ ಇತರ ಸವಲತ್ತುಗಳನ್ನು ಒದಗಿಸುವ ಭರವಸೆ ನೀಡಿದರು.

ಆಂಜನೇಯ ಬಡಾವಣೆಗೆ ಹೊಂದಿಕೊಂಡಿರುವ ಕಂಠೇನಹಳ್ಳಿ ಕೆರೆಯ ಅಭಿವೃದ್ಧಿಗೆ 4 ಕೋಟಿ ಅನುದಾನ ನೀಡಿದ್ದು ಅದನ್ನು ಕಲ್ಯಾಣಿಯಾಗಿ ಮಾರ್ಪಡಿಸಿ ಅಲ್ಲಿನ ಏರಿಯ ಮೇಲೆ ಸುಂದರ ಉದ್ಯಾನ ನಿರ್ಮಿಸುವುದಾಗಿ ಪ್ರಕಟಿಸಿದರು.

ಈ ಎಲ್ಲಾ ಅಭಿವೃದ್ದಿ ಕೆಲಸಗಳ ಜತೆಗೆ ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭೆ ಬಯಲು ರಂಗ ಮಂದಿರದ ಸುತ್ತ ಸುತ್ತುವ ತಡೆಗೋಡೆ ನಿರ್ಮಿಸಿ ಅಲ್ಲಿನ ಒಂದು ಬಾಗದಲ್ಲಿ ಪುಟ್ಟ ಉದ್ಯಾನ ನಿರ್ಮಾಣ ಮಾಡಿ ಆ ಸ್ಥಳದಲ್ಲಿ ಡಾ.ರಾಜಕುಮಾರ್, ಪಾರ್ವತಮ್ನ ರಾಜಕುಮಾರ್ ಮತ್ತು ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಪ್ರತಿಮೆ ನಿರ್ಮಿಸುವುದಾಗಿ ನುಡಿದರು.

ಪುರಸಭೆ ಅಧ್ಯಕ್ಷ ಡಿ.ಶಿವುನಾಯಕ್ ಮಾತನಾಡಿ ನಮ್ಮ ಕ್ಲಿನಿಕ್ ಆರಂಬಿಸಿರುವುದರ ಜತೆಗೆ ಇಲ್ಲಿ ಮೂಲಭೂತ ಸವಲತ್ತು ಕಲ್ಪಿಸಲು 7 ಲಕ್ಷ ಹಾಗೂ ವಾರ್ಡಿನ ಉದ್ಯಾನವನದ ಅಭಿವೃದ್ದಿಗೆ 7 ಲಕ್ಷ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇಲ್ಲಿಗೆ ಬರುವ ಸಾರ್ವಜನಿಕರೊಂದಿಗೆ ವೈಧ್ಯರು ಹಾಗೂ ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ಉತ್ತಮ ಚಿಕಿತ್ಸೆ ನೀಡಬೇಕೆಂದು ಮನವಿ ಮಾಡಿದ ಅವರು ಯಾವುದೇ ಸಹಕಾರ ಮತ್ತು ಸಹಾಯ ಅಗತ್ಯವಿದ್ದರು ಸಕಾಲದಲ್ಲಿ ಒದಗಿಸುವ ವಾಗ್ದಾನ ನೀಡಿದರು.

ಉಪಾಧ್ಯಕ್ಷೆ ವಸಂತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಶಂಕರ್, ಸದಸ್ಯರಾದ ಸಂತೋಷ್ ಗೌಡ, ಕೆ.ಜಿ.ಸುಬ್ರಹ್ಮಣ್ಯ, ಕೋಳಿಪ್ರಕಾಶ್, ನಟರಾಜು, ಶಂಕರ್ ಸ್ವಾಮಿ, ಕೆ.ಎಲ್.ಜಗದೀಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಎಂ.ಎಸ್
ಮಹದೇವ್, ಉದಯಶಂಕರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಹೆಚ್.ಹೆಚ್.ನಾಗೇಂದ್ರ, ಎಂ.ನಾಗರತ್ನರೇವಣ್ಣ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮಂಜು, , ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಆಂಜನೇಯ ಬಡಾವಣೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಮಹದೇವ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಿ.ಜೆ‌. ನವೀನ್ ಕುಮಾರ್, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಸಿರಾಜ್ ಅಹಮದ್, ನಮ್ಮ ಕ್ಲಿನಿಕ್ ವೈಧ್ಯ ಡಾ.ನೇತ್ರೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ವಿ.ರಮೇಶ್, ಎಸ್.ಎಂ.ಗಂಗಾಧರ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular