ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಇಡೀ ಜಗತ್ತಿನಲ್ಲಿ ಈಗ ಕನ್ನಡನಾಡಿನ ಕಾಂತಾರ ಚಲನಚಿತ್ರದ ಅಬ್ಬರ ಚಿತ್ರ ಪ್ರೇಮಿಗಳನ್ನು ಮೋಡಿಗೊಳಪಡಿಸುತ್ತಿದೆ. ಭಾರತೀಯ ಚಲನಚಿತ್ರದಲ್ಲೇ ದಾಖಲೆ ನಿರ್ಮಿಸುತ್ತ ದಾಪುಗಾಲು ಹಾಕುತ್ತಿದೆ. ಖ್ಯಾತ ನಾಮ ಚಲನಚಿತ್ರಗಳ ದಾಖಲೆಯನ್ನು ಪುಡಿಗಟ್ಟುತ್ತಾ ಸಾಗುತ್ತಿದೆ.
ಆದರೆ ಬೆಳಗಾವಿಯಲ್ಲಿ…..!
ಕಾಂತಾರ ಚಲನ ಚಿತ್ರ ಪ್ರದರ್ಶನಕ್ಕೆ ತಾಂತ್ರಿಕ ಅಡಚಣೆಯುಂಟಾದ ಪರಿಣಾಮವಾಗಿ ಒಂದೂವರೆ ಗಂಟೆ ವಿಳಂಬವಾಯಿತು. ಇದರಿಂದಾಗಿರೊಚ್ಚಿಗೆದ್ದ ವೀಕ್ಷಕರು ಚಲನಚಿತ್ರಮಂದಿರದ ಕಚೇರಿಗೆ ಮುತ್ತಿಗೆ ಹಾಕಿದಘಟನೆ ರವಿವಾರ ನಗರದಲ್ಲಿ ನಡೆದಿದೆ.
ಮಧ್ಯಾಹ್ನ 3.30ರ ಚಿತ್ರ ಪ್ರದರ್ಶನ 4.45ಗಂಟೆ ಆದರೂ ಆರಂಭವಾಗಲೇ ಇಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ವೀಕ್ಷಕರು ಚಿತ್ರಮಂದಿರದ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹಣ ಮರಳಿಸುವಂತೆ ಆಗ್ರಹಿಸಿದರು. ಪೊಲೀಸರು ಮನವೊಲಿಸಲು ಹರಸಾಹಸಪಟ್ಟರು.
ನ್ಯೂಕ್ಲಿಯಸ್ಮಾಲ್ನಲ್ಲಿ ಘಟನೆ ನಡೆದಿದ್ದು, ಪ್ರತಿ ಟಿಕೆಟ್ ಗೆ 150 ರೂ. ಹೆಚ್ಚುವರಿಯಾಗಿ ಹಣ ಮರಳಿಸಿದರು.
ಆದರೆ, ವೀಕ್ಷಕರು ಎರಡರಷ್ಟು ಹಣ ನೀಡುವಂತೆ ಆಗ್ರಹಿಸಿದರು. ಸ್ಥಳಕ್ಕೆ ಖಡೇಬಜಾರ್ ಠಾಣೆಯ ಪೊಲೀಸರು ಬಂದು ತಿಳಿಗೊಳಿಸಿದರು. ಹಣ ಮರಳಿ ಪಡೆಯಲು ನೂಕುನುಕಲು ಉಂಟಾಯಿತು.