Saturday, June 7, 2025
Google search engine

Homeಅಪರಾಧಕೆಐಎಡಿಬಿ ಲಂಚ ಪ್ರಕರಣ: 1.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೂಪರ್‌ವೈಸರ್ ಲೋಕಾಯುಕ್ತ ಬಲೆಗೆ

ಕೆಐಎಡಿಬಿ ಲಂಚ ಪ್ರಕರಣ: 1.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೂಪರ್‌ವೈಸರ್ ಲೋಕಾಯುಕ್ತ ಬಲೆಗೆ

ಬೆಂಗಳೂರು: ವ್ಯಕ್ತಿಯೊಬ್ಬರು ಕೆಐಎಡಿಬಿಗೆ ಸಲ್ಲಿಸಿದ್ದಂತ ಸ್ಕೆಚ್ ಗೆ ಅನುಮೋದನೆ ನೀಡಲು 1.50 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುತ್ತಿದ್ದಂತ ವೇಳೆಯಲ್ಲಿ ಸೂಪರ್ ವೈಸರ್ ಒಬ್ಬರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ರವಿ ಎಂಬುವರು ಬೆಂಗಳೂರಿನ ಕೆಐಎಡಿಬಿಗೆ ಸ್ಕೆಚ್ ತಯಾರಿಸಿ ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅನುಮೋದಿಸೋದಕ್ಕೆ ಕೆಐಎಡಿಬಿ ಸರ್ವೆ ಸೂಪರ್ ವೈಸರ್ ನರೇಂದ್ರ ಕುಮಾರ್ ಎಂಬುವರು 1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರವಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರು ಆಧರಿಸಿ ಬೆಂಗಳೂರಿನ ಲೋಕಾಯುಕ್ತ ಎಸ್ಪಿ ಡಾ.ವಂಶಿ ಕೃಷ್ಣ ಮೇಲ್ವಿಚಾರಣೆಯಲ್ಲಿ ಪಿಐ ಅನೀಲ್ ಕುಮಾರ್, ಪ್ರಶಾಂತ್, ಅಂಜನ್ ಕುಮಾರ್ ನೇತೃತ್ವದ ತಂಡವು ಕೆಐಎಡಿಬಿ ಸರ್ವೆ ಮೇಲ್ವಿಚಾರಕ ನರೇಂದ್ರ ಕುಮಾರ್ ಲಂಚದ ಹಣವಾಗಿ 1.50 ಲಕ್ಷ ಪಡೆಯುತ್ತಿದ್ದಂತ ಸಂದರ್ಭದಲ್ಲಿ ದಾಳಿ ನಡೆಸಿದೆ.

ದಾಳಿಯ ಸಂದರ್ಭದಲ್ಲಿ ಬೆಂಗಳೂರಿನ ಕೆಐಎಡಿಬಿ ಸರ್ವೆ ಮೇಲ್ವಿಚಾರಕ ನರೇಂದ್ರ ಕುಮಾರ್ ಪಡೆಯುತ್ತಿದ್ದಂತ 1.50 ಲಕ್ಷ ಲಂಚದ ಹಣವನ್ನು ರೆಡ್ ಹ್ಯಾಂಡ್ ಹಿಡಿದಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular