Wednesday, June 4, 2025
Google search engine

Homeರಾಜ್ಯಸುದ್ದಿಜಾಲಜ್ಞಾನವೇ ಶ್ರೇಷ್ಠ ಸಂಪತ್ತು : ಉಪನಿರ್ದೇಶಕ ಚೆಲುವಯ್ಯ

ಜ್ಞಾನವೇ ಶ್ರೇಷ್ಠ ಸಂಪತ್ತು : ಉಪನಿರ್ದೇಶಕ ಚೆಲುವಯ್ಯ

ಮಂಡ್ಯ: ವಿಶ್ವದಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಜ್ಞಾನ ಹೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚೆಲುವಯ್ಯ ಹೇಳಿದರು.

ನಗರದ ಸರ್ .ಎಂ. ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ 2025_ 2026 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತರಗತಿ ಪ್ರಾರಂಭೋತ್ಸವ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ನೀಡುವ ಮೂಲಕ ಪದವಿ ಪೂರ್ವ ಕಾಲೇಜಿಗೆ ಸ್ವಾಗತ ಕೋರಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸೇರಿದಂತೆ ಹಲವಾರು ಮಹನೀಯರು ಅದ್ಭುತವಾದ ಜ್ಞಾನ ಸಂಪಾದಿಸಿ ಅದನ್ನ ಸಮಾಜದ ಒಳಿತಿಗಾಗಿ ವಿನಿಯೋಗಿಸಿದರು ಆದುದರಿಂದಲೇ ಅವರು ಜಾತಿ ,ಧರ್ಮ ಎಂಬ ಸೀಮಿತ ಚೌಕಟ್ಟನ್ನ ಮೀರಿ ಅವರ ಆದರ್ಶಗಳು ಸಮಾಜದಲ್ಲಿ ಇಂದಿಗೂ ಜೀವಂತವಾಗಿವೆ ಎಂದು ಅಭಿಪ್ರಾಯಪಟ್ಟರು.

ಶಾಲಾ ಕಾಲೇಜುಗಳು ಜ್ಞಾನ ದೇಗುಲಗಳಾಗಿದ್ದು ವಿದ್ಯಾರ್ಥಿಗಳು ನಿಯಮಿತವಾಗಿ ಕಾಲೇಜುಗಳಿಗೆ ಹಾಜರಾಗುವ ಮೂಲಕ ಉಪನ್ಯಾಸಕರು ನೀಡುವ ಮಾರ್ಗದರ್ಶನಗಳ ಜೊತೆ ಜೊತೆಗೆ ದೊಡ್ಡ ಆದರ್ಶ ವ್ಯಕ್ತಿಗಳ ಪುಸ್ತಕಗಳನ್ನ ಅಧ್ಯಯನ ಮಾಡಿ ವ್ಯಕ್ತಿತ್ವವನ್ನ ರೂಪಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪದವಿಪೂರ್ವ ಶಿಕ್ಷಣವು ಮಹತ್ತರ ಘಟ್ಟವಾಗಿದ್ದು ನಿರಂತರ ಅಭ್ಯಾಸ ಕಠಿಣ ಪರಿಶ್ರಮ ಹಾಗೂ ಏಕಾಗ್ರತೆಯೊಂದಿಗೆ ಅಧ್ಯಯನ ಮಾಡುವ ಮೂಲಕ ಉತ್ತಮ ಫಲಿತಾಂಶ ಪಡೆದು ಮುಂದಿನ ದಿನಗಳಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಸೇರಿ ಅಧ್ಯಯನ ಮಾಡುವಂತೆ ಸಲಹೆ ನೀಡಿದರು.

ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಕೇವಲ ಪದವಿಗಳಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದ ಅವರು ಸೃಜನಶೀಲತೆ ಮತ್ತು ನೈಪುಣ್ಯತೆಯನ್ನು ಮೈಗೂಡಿಸಿ ಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದರು. ಪರೀಕ್ಷಾ ಫಲಿತಾಂಶದಲ್ಲಿ ಯಶಸ್ಸು ಸಾಧಿಸಲು ಮೊಬೈಲ್ ಚಟ್ಟದಿಂದ ದೂರವಿದ್ದು ನಿರಂತರ ಅಭ್ಯಾಸದ ಜೊತೆಗೆ ತಮ್ಮ ಸೋಮಾರಿತನ ಹಾಗೂ ದುಶ್ಚಟಗಳನ್ನ ಬಿಟ್ಟು ಉತ್ತಮ ಅಂಕ ಪಡೆದು ಪೋಷಕರಿಗೆ, ಗುರುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.


ಉಪನ್ಯಾಸಕರುಗಳಿಗೆ ಕಿವಿಮಾತು: ಜಿಲ್ಲೆ ಅತ್ಯಂತ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಇಂದಿನಿಂದಲೇ ತರಗತಿಗಳನ್ನು ಆರಂಭಿಸಿದ್ದು ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳಲ್ಲಿತೊಡಗಿಕೊಂಡಿರುವುದು ತುಂಬಾ ಖುಷಿಯ ವಿಚಾರ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಬಹುತೇಕ ಕೃಷಿಕ ಜಿಲ್ಲೆಯಾಗಿದ್ದು ರೈತಪಿ ಕುಟುಂಬಗಳಿಂದ ಬಂದಂತಹ ವಿದ್ಯಾರ್ಥಿಗಳ ಜೊತೆ ಪ್ರೀತಿ ವಿಶ್ವಾಸ ಸಹನೆ ಯ ಮೂಲಕ ವರ್ತಿಸುವ ಮೂಲಕ ವಿದ್ಯಾರ್ಥಿಗಳ ಏಳಿಗೆಗೆ ಶ್ರಮ ವಹಿಸಬೇಕೆಂದು ಕಿವಿಮಾತು ಹೇಳಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿಭಾಗದಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಇದಕ್ಕೆ ವಿದ್ಯಾರ್ಥಿಗಳ, ಉಪನ್ಯಾಸಕರ, ಹಾಗೂ ಪೋಷಕರು ಎಲ್ಲರೂ ಕಾರಣರಾಗಿದ್ದು ಅವರಿಗೆ ಇಲಾಖೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರಲ್ಲದೆ ಪ್ರಸ್ತುತ ಸಾಲಿನಲ್ಲೂ ಕೂಡ ಉತ್ತಮ ಫಲಿತಾಂಶವನ್ನು ಗಳಿಸುವಲ್ಲಿ ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ನಾಗಚಂದ್ರ, ಪ್ರಾಂಶುಪಾಲ ಶಿವಲಿಂಗೇಗೌಡ, ಉಪನ್ಯಾಸಕರುಗಳಾದ ವಿಶ್ವನಾಥ್ ,ಶ್ರೀನಿವಾಸ, ಶೈಲಜಾ,ಕೆಂಪಲಿಂಗಯ್ಯ ಪಂಚಲಿಂಗೇಗೌಡ , ವೀಣಾ, ಮೇಘನಾ, ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular