Friday, June 20, 2025
Google search engine

Homeರಾಜಕೀಯಮಂಡ್ಯಕ್ಕೆ ಕುಮಾರಣ್ಣ, ಇಂಡಿಯಾಗೆ ಮೋದಿ: ಆರ್.ಅಶೋಕ್

ಮಂಡ್ಯಕ್ಕೆ ಕುಮಾರಣ್ಣ, ಇಂಡಿಯಾಗೆ ಮೋದಿ: ಆರ್.ಅಶೋಕ್

ಮಂಡ್ಯ: ಮಂಡ್ಯಕ್ಕೆ ಕುಮಾರಣ್ಣ, ಇಂಡಿಯಾಗೆ ಮೋದಿ. ಯಾರೋ ಕಾಂಟ್ರಾಕ್ಟ್ ಬಂದು ನಿಂತರೆ ಜನರು ಮರಳಾಗಲ್ಲ. ರಾಜಕಾರಣ ಮಾಡಲು ಒಬ್ಬ ರೈತನ ಮಗ ಬಂದಿದ್ದಾರೆ. ದೇವೇಗೌಡ್ರು ಮಗ ಬಂದಿರೋದು ಗಮನಕ್ಕೆ ಇಟ್ಟುಕೊಂಡು ಕೆಲಸ ಮಾಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣಾ ಎಸ್ಪಿ-ಎಸ್ಟಿ ಮೋರ್ಚ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏ.14 ರಂದು ಮೈಸೂರಿನಲ್ಲಿ ಮೋದಿ ಸಭೆ ಇದೆ, ಯಶಸ್ವಿ ಮಾಡಬೇಕು. ನರೇಂದ್ರ ಮೋದಿ ಅಲೆ ಪ್ರಾರಂಭವಾಗುತ್ತದೆ. ಮೊದಲ ಹಂತದ ಚುನಾವಣೆಗೆ ಅಲೆ ಶುರುವಾಗಬೇಕು. ಮೈಸೂರಿನ ದೊಡ್ಡ ಸಭೆ ಒಂದು ದಾಖಲೆಯಾಗಬೇಕು. ಒಂದೇ ವೇದಿಕೆಯಲ್ಲಿ ಮೋದಿ, ದೇವೇಗೌಡ್ರು ಇರ್ತಾರೆ‌ ಮಾತನಾಡ್ತಾರೆ‌. ಹಾಲಿ, ಮಾಜಿ ಪ್ರಧಾನಿ ವೇದಿಕೆ ಮೇಲೆ ಇರ್ತಾರೆ. ಕಾರ್ಯಕ್ರಮ ಯಶಸ್ವಿಯಾದರೆ ಪ್ರತಿಫಲ ಕರ್ನಾಟಕಕ್ಕೆ ಸಿಗುತ್ತೆ. ಹಳ್ಳಿ ಹಳ್ಳಿಗಳಿಂದ ಜನರು ಬರಬೇಕು. ಮೋದಿ ಕಾರ್ಯಕ್ರಮಕ್ಕೆ ಮಂಡ್ಯದಿಂದ ಪಾದಯಾತ್ರೆ ಮಾಡಿ ಎಂದು ಹೇಳಿದರು.

ಮಂಡ್ಯದಲ್ಲಿ ಹನುಮಧ್ವಜ ತೆರವು ವಿರುದ್ದ ಹೇಗೆ ನಡೆದುಕೊಂಡರು. ರಾಮ ನಮ್ಮೂರಲ್ಲಿದ್ದಾನೆ ಅಂತಾರೆ. ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾರೆ ಕಾಂಗ್ರೆಸ್ ಗೆ ನಾಚಿಕೆ ಆಗಲ್ವ? ಕಾಂಗ್ರೆಸ್ ಬಂದಮೇಲೆ ಈ ರೀತಿಯ ಕೃತ್ಯ. ರಾಮೇಶ್ವರಂ ಕೆಫೆ ಪ್ರಕರಣ ಡಿಕೆಶಿ ಗೆ ನಾಚಿಕೆ ಆಗಲ್ವಾ? ಈಗ ಒಕ್ಕಲಿಗರ ಬಗ್ಗೆ ಮಾತನಾಡ್ತಾರೆ. ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಬ್ರದರ್ ಅಂತಾರೆ ಹಾಗಾದ್ರೆ ನೀವು ಹೇಗೆ ಬ್ರದರ್.? ಎಂದು ಪ್ರಶ್ನಿಸಿದರು.

ಒಕ್ಕಲಿಗ ಮಠಕ್ಕೆ ಹೋಗಿ ಬಂದಿದಕ್ಕೆ ದೊಡ್ಡ ಚರ್ಚೆಯಾಗಿದ್ದು, ಇವರು ಹೋಗಿದಕ್ಕೆ ಎನು ಆಗಿಲ್ಲ. ನಾವು ಹೋದಮೇಲೆ ವಾರಸುದಾರರು ಅಂತ ಜನ ತೀರ್ಮಾನ ಮಾಡಿರೋದು. ಲಿಂಗಯತರು ಬಿಟ್ಟರು ಒಕ್ಕಲಿಗರೇ ಹೆಚ್ಚು ಇರೋದು. ರ್ಯಾಂಕ್ ನಲ್ಲಿ 6ನೇ ಸ್ಥಾನಕ್ಕೆ ಬಂದಿದ್ದೇವೆ.  ಸಿದ್ದರಾಮಯ್ಯ ಸಮುದಾಯವನ್ನ ಎಲ್ಲಿಗೆ ನಿಲ್ಲಿಸಿದ್ದಾರೆ. ನಮ್ಮ ಮಠ ಎಲ್ಲಾ ಸಮುದಾಯಕ್ಕಾಗಿ ಇರುವ ಮಠ ಎಂದು ಹೇಳಿದರು.

ದೇಶಕ್ಕೆ ಪ್ರಧಾನಿ ಯಾರಾಗುತ್ತಾರೆ ಅಂದ್ರೆ ಮೋದಿ ಅಂತಾರೆ. ನರೇಂದ್ರ ಮೋದಿ ಪಕ್ಕ ಕುರುವವರು ಮಂಡ್ಯದವರಾಗಿರಬೇಕು ಅದು ತಾಕತ್ ,ಧಮ್ ತೋರಿಸಬೇಕು. ಕಾಂಟ್ರಾಕ್ಟ್ ರ ಬೇಕಿಲ್ಲ, ಮಂಡ್ಯ ರೈತನ ಮಗನಿಗೆ ಸಿಗಬೇಕು‌. ಸುಮ್ಮನೆ ಮಂಡ್ಯದಲ್ಲಿ ಕುಮಾರಣ್ಣ ನಿಂತಿಲ್ಲ, ಕಾವೇರಿ ಹೋರಾಟ ಮಾಡಲು ನಿಂತಿರೋದು. ಕಳೆದ ಬಾರಿ ಮೈತ್ರಿಗೆ ಕಾಂಗ್ರೆಸ್ ಹುಳಿ ಹಾಕಿತ್ತು. ಸರ್ಕಾರ ಬಿಳಿಸಿದ್ದು ಬಿಜೆಪಿಯವರು ಅಂತರೆ ಡಿಕೆಶಿ. ನಾವು ಮನೆಯಲ್ಲಿದ್ದೊ ಸಿದ್ದರಾಮಯ್ಯ ಅವರದೇ ಬಂದಿದ್ದು. ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಸೋಲಿಸಿದ್ದು ಅಂತ ಸಿದ್ದರಾಮಯ್ಯ ಹೇಳ್ತಾರೆ. ಬೆನ್ನಿಗೆ ಚೂರಿ ಹಾಕಿದ್ದು ಸಿದ್ದರಾಮಯ್ಯ. ತಿಂದು, ಮಂತ್ರಿಯಾಗಿ, ಚೂರಿ ಹಾಕಿದ್ರು ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಮಾರಕ. ಕಾಂಗ್ರೆಸ್ ನಾಯಕರು ಜೈಲು, ಬೇಲ್ ನಲ್ಲಿದ್ದಾರೆ. ದೇಶಕ್ಕೆ ಒಳ್ಳೆಯ ಕಾವಲುಗಾರ ಬೇಕು. ಮೋದಿ V/S ರಾಹುಲ್ಲ ನಡುವೆ ಚುನಾವಣೆ ನಡೆಯುತ್ತಿದೆ. ರಾಹುಲ್ಲಾ ಹೆಸರನ್ನು ಹೇಳ್ತಿಲ್ಲ, ರಾಹುಲ್ಲ ಅವರನ್ನ ಮಗು ತರ ನೋಡ್ತಿದ್ದಾರೆ. ಅವರನ್ನ ಮುಂದೆ ಬಿಡ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಗೆ ಮೋದಿ ವರ್ಸಸ್ ರಾಹುಲ್. ಈ ಚುನಾವಣೆ ದೇಶಕ್ಕೆ ಸಂಬಂಧಿಸಿದ ಚುನಾವಣೆ ಎಂದು ಹೇಳಿದರು.

ಕಳೆದ ಒಂದು ವರ್ಷದಲ್ಲಿ ಅಭಿವೃದ್ಧಿ ಕಾರ್ಯವಾಗಿಲ್ಲ. ಬರಗಾಲದ ಪರಿಹಾರ ಬಂದಿಲ್ಲ, ಕುಡಿಯುವ ನೀರಿಲ್ಲ. ಕರೆಂಟ್ ಇಲ್ಲ ಇದು ಕಾಂಗ್ರೆಸ್ ಕಳ್ಳಾಟ ವಿಷ ಬೀಜ ಇರುವ ಕಾಂಗ್ರೆಸ್ ತೊಲಗಿಸಿ ಎಂದು ಹರಿಹಾಯ್ದರು.

RELATED ARTICLES
- Advertisment -
Google search engine

Most Popular