ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಮೈಸೂರಿನ ಇಬ್ಬರು ಪತ್ರಕರ್ತರು ಕೆಯುಡಬ್ಲ್ಯೂ ಜೆ ವಾರ್ಷಿಕ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ರವಿ ಬೆಳಗೆರೆ ಪ್ರಶಸ್ತಿಗೆ ಹಲೋ ಮೈಸೂರ್ ಪತ್ರಿಕೆಯ ಟಿ. ಗುರುರಾಜ್ ಮತ್ತು ಅತ್ಯುತ್ತಮ ಪೋಟೋಗ್ರಫಿ ಪ್ರಶಸ್ತಿಗೆ ಅನುರಾಗ್ ಬಸವರಾಜು ಆಯ್ಕೆಯಾಗಿದ್ದಾರೆ.
ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ.