Wednesday, June 4, 2025
Google search engine

Homeರಾಜ್ಯಸುದ್ದಿಜಾಲಹಾಲು ಉತ್ಪಾದಕರ ಸಂಘಕ್ಕೆ ಎಂ.ಕವಿತ ಆಯ್ಕೆ

ಹಾಲು ಉತ್ಪಾದಕರ ಸಂಘಕ್ಕೆ ಎಂ.ಕವಿತ ಆಯ್ಕೆ

ಮಂಡ್ಯ: ತಾಲ್ಲೂಕಿನ ಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಎಂ.ಕವಿತಾ ಅವರು ಅವಿರೋಧವಾಗಿ ಆಯ್ಕೆಯಾದರು.

ನಾಮಪತ್ರವನ್ನು ಎಂ.ಕವಿತ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾ ಅಧಿಕಾರಿ ಸಂತೋಷ್ ಕುಮಾರ್ ಅವರು ಉಪಾಧ್ಯಕ್ಷರಾಗಿ ಎಂ.ಕವಿತ ಅವರ ಹೆಸರನ್ನು ಅಂತಿಮ ಗೊಳಿಸಿ ಘೋಷಣೆ ಮಾಡಿದರು.

ಉಪಾಧ್ಯಕ್ಷ ಎಂ.ಕವಿತ ಮಾತನಾಡಿ, ನನಗೆ ಬೆಂಬಲ ನೀಡಿದ ಸದಸ್ಯರು ಹಾಗೂ ಜನಪ್ರತಿನಿಧಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಸಂಘದ ಅಭಿವೃದ್ಧಿಗೆ ಎಲ್ಲರನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗುವ ಮೂಲಕ ಲಾಭದಾಯಕ ತಂದು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.

ನಾನು ಸೇರಿದಂತೆ ಸಂಘದ 13 ಮಂದಿ ಸದಸ್ಯರು ನನ್ನನ್ನು ಆಯ್ಕೆ ಮಾಡಲು ಸಹಕರಿಸಿದ್ದಾರೆ, ಈ ನಂಬಿಕೆಯನ್ನು ನಾನು ಉಳಿಸಿಕೊಳ್ಳುವಲ್ಲಿ ಸಾಗುತ್ತೇನೆ, ಜೊತೆಗೆ ಸಂಘದ ಅಭಿವೃದ್ಧಿಯಲ್ಲಿ ಸಂಬಂಧ ಇಲಾಖೆಯಿಂದ ಅನುದಾನ ತರುವ ನಿಟ್ಟಿನಲ್ಲಿಯೂ ನಾನು ಅಧ್ಯಕ್ಷರ ಜೊತೆಗೂಡಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎನ್.ಶಿವರಾಮು, ಸದಸ್ಯರಾದ ಎಚ್.ಬಿ.ಕೃಷ್ಣ, ದೊಡ್ಡಸಿದ್ದಯ್ಯ, ಎಚ್.ಎನ್.ಚರಣ್, ಸಾವಿತ್ರಮ್ಮ, ಪಿ.ಸಾಗರ್, ಎಚ್.ಎಲ್.ನಿಂಗರಾಜು, ಲಲಿತಮ್ಮ, ಭಾಗ್ಯ, ಅನುರಾಧ, ಅನುಸೂಯ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular