ಮೈಸೂರು :ಕೆ . ಆರ್ . ನಗರ : ಗ್ರಾಮೀಣ ಭಾಗದ ಕೂಲಿಕಾರರು ಮ ನರೇಗಾ ಯೋಜನೆ ಸದುಪಯೋಗಕ್ಕಾಗಿ ಆರ್ಥಿಕವಾಗಿ ಸಮರ್ಥವಾಗುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ವಿ . ಪಿ . ಕುಲ್ ದೀಪ್ ಅವರು ಹೇಳಿದರು .
ಮಾವತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ಗ್ರಾಮ ಸಭೆ , ಸ್ತ್ರೀ ಚೇತನ ಮತ್ತು ದುಡಿಯೋಣ ಬಾ ಅಭಿಯಾನವನ್ನು ಅವರು ಉದ್ಘಾಟಿಸಿದರು . ಪ್ರಸಕ್ತ ಸಾಲಿನಿಂದ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಮೊತ್ತವು 349 ರೂಗಳಿಂದ 370 ರೂ . ಗೆ ಹೆಚ್ಚಾಗಿದೆ . ಕುಟುಂಬವೊ ಒ ದಕ್ಕೆ ನೂರು ದಿನಗಳ ಕೆಲಸ ಖಾತರಿ ಇದೆ , ವಾರ್ಷಿಕವಾಗಿ 37 ಸಾವಿರ ರೂ . ಗಳನ್ನು ಗಳಿಸಿದ . ಜೊತೆಗೆ , ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಬಳಸಲು ಆರ್ಥಿಕವಾಗಿ ಸಬಲರಾಗಬಹುದು ಎಂದು ಪ್ರಕಟಿಸಲಾಗಿದೆ .
ಮ – ನರೇಗಾದಲ್ಲಿ ಶೇ .50 ರಷ್ಟಿರುವ ಮಹಿಳಾ ಕೂಲಿಕಾರ್ಮಿಕರ ಸಂಖ್ಯೆ ಶೇ .60 ಕ್ಕೆ ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ . , ಮೂರು ತಿಂಗಳ ಮಹಿಳಾ ಕೂಲಿಕಾರರಿಗೆ ನಿರಂತರ ಕೆಲಸಕ್ಕೆ ಆದ್ಯತೆ ನೀಡುವುದು , ಮಹಿಳಾ ಸಬಲೀಕರಣವನ್ನು ನರೇಗಾ ಯೋಜನೆ ಮೂಲಕ ಕೈಗೊಳ್ಳುವುದು ಸ್ತ್ರೀ ಚೇತನ ಅಭಿಯಾನದ ಉದ್ದೇಶವಾಗಿದೆ .
ಗ್ರಾಮ ಪಂಚಾಯಿತಿ ಮ – ನರೇಗಾ ಯೋಜನೆಯಡಿ ನಿರ್ಮಾಣವಾಗುವ ಕೆರೆ – ಕಟ್ಟೆ , ಚರಂಡಿ , ಕಾಂಪೌ ಎ ಡಿ , ಮೆಟ್ಟಿಂಗ್ ರಸ್ತೆ ನಿರ್ಮಾಣದಂತಹ ಸಮುದಾಯ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು .
ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಮೇಶ್ ರವರು ಮಾತಾನಾಡಿ ಮಹಿಳಾ ಗ್ರಾಮ ಸಭೆಯಲ್ಲಿ ಸ್ಥಳಿಯ ಆಡಳಿತದಲ್ಲಿ ಮಹಿಳೆಯರು ಭಾಗವಹಿಸಿದ್ದರು ಇರುವ ವಿಶೇಷ ವೇದಿಕೆಯಾಗಿದೆ , ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು .
ಮಹಿಳಾ ಗ್ರಾಮ ಪ್ರಯುಕ್ತ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು .
ಇದೇ ವೇಳೆ ಗ್ರಾ . ಪಂ . ಅಧ್ಯಕ್ಷರು ಸುಕನ್ಯಾ ಕೃಷ್ಣನಾಯಕ , ಉಪಾಧ್ಯಕ್ಷರಾದ ಭವ್ಯ ಶಂಕರ್ , ಸದಸ್ಯರಾದ ಸ್ಮಿತಾ , ಎಂ ಲೋಹಿತ್ , ಎಸ್ ನಟರಾಜು , ತ್ಯಾಗರಾಜು , ಗ್ರಾ . ಪಂ ಕಾರ್ಯದರ್ಶಿ ಗೋಪಾಲ್ , ಡಿ . ಇ . ಓ ಅರುಣ್ , ಸೇರಿದಂತೆ ಆಶಾ ಅಂಗನವಾಡಿ ಕಾರ್ಯಕರ್ತರು ಮತ್ತು ಗ್ರಾಮದ ಮಹಿಳೆಯರು .