ವರದಿ : ವಿನಯ್ ದೊಡ್ಡಕೊಪ್ಫಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಗ್ರಾಮದಲ್ಲಿ ಇರುವ 66/11 ಕೆ.ವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ದಿನಾಂಕ ಜೂನ್.4.ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳಬೇಕಾಗಿರುವುದರಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೆ.ಆರ್ ನಗರ ಉಪ-ವಿಭಾಗದ ಹೊಸೂರು ಶಾಖೆಯ ವ್ಯಾಪ್ತಿಗೆ ಒಳಪಡುವ ಹಳಿಯೂರು , ಹೊಸಕೋಟೆ, ಕುಪ್ಪೆ, ಮಾಯಗೌಡನಹಳ್ಳಿ, ಮಾವತ್ತೂರು ಮತ್ತು ಕೆಸ್ತೂರು ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರು ವಿದ್ಯುತ್ ಇಲಾಖೆಯೊಡನೆ ಸಹಕರಿಸಬೇಕೆಂದು ಕೆ.ಆರ್.ನಗರ ವಿಭಾಗದ ಎಇಇ ಅರ್ಕೇಶ್ ಮೂರ್ತಿ , ಹೊಸೂರು ಶಾಖೆಯ ಇಂಜಿನಿಯರ್ ಮಹದೇವ್ ತಿಳಿಸಿದ್ದಾರೆ.