ಮೈಸೂರು : ಸುತ್ತಮುತ್ತಲಿನ ತಾಪಮಾನ , ಹವಾಮಾನ ವೈಪರೀತ್ಯದ ಬದಲಾವಣೆಗಳಾಗುತ್ತಿರುವ ಸಮಸ್ಯೆಗಳು ಕಂಡುಬರುತ್ತಿವೆ . ನಾವು ಅಭಿವೃದ್ದಿಯೊಂದಿಗೆ ನೈಸರ್ಗಿಕವಾಗಿ ಬಂದಿರುವ ಸಂಪನ್ಮೂಲಗಳನ್ನು ಉಳಿಸಿಕೊಳ್ಳಬೇಕು . ಮನುಷ್ಯ ಪರಿಸರ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ಅರಿಯದಿದ್ದರೆ ಮುಂದೆ ಕಷ್ಟಪಟ್ಟೆ ಎಂದು ಶಾಸಕ ಜಿ . ಟಿ . ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರು ಹೊರವಲಯದ ಕೂರ್ಗಳ್ಳಿ ಗ್ರಾಮದಲ್ಲಿ ಆಟೋಮೋಟಿವ್ ಆಕ್ಸಲ್ ಲಿಮಿಟೆಡ್ , ನಗರಸಭೆ , ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆರೆಯ ಅಭಿವೃದ್ದಿ , ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಸಂಪೂರ್ಣ ಗಾಳಿ , ಸಮಾಜ ಇರಬೇಕಾದರೆ ನಮ್ಮ ಸುತ್ತಲೂ ಗಿಡ , ಮರಗಳು ಇರಬೇಕು . ಅದರೊಂದಿಗೆ ನಾವೆಲ್ಲರೂ ಇದ್ದರೆ ಉಸಿರಾಡಬಹುದು ಎಂದು ಹೇಳಿದರು .
ನಾವು ಮುಂದುವರಿದಿದ್ದೇವೆ . ಆದರೆ , ಉಸಿರಾಡಲು ಪೂರಕವಾಗುವಂತೆ ಗಾಳಿ ದೊರೆಯಲು ಹಿಂದಿನವರು ಸಾಲು ಮರಗಳನ್ನು ನೆಡುವಂತೆ ಮಾಡುತ್ತಿದ್ದರು . ದೊಡ್ಡ ದೊಡ್ಡಮರಗಳನ್ನು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು . ನಾನು ಸಹಕಾರ ಸಚಿವನಾಗಿದ್ದಾಗ ವಿಧಾನ ಸಭೆಯ ಅದ್ಯಕ್ಷ ಕೆ . ಆರ್ ಪೇಟೆ ಕೃಷ್ಣ , ವಿಧಾನ ಪರಿಷತ್ ಸಭಾಪತಿ ಪ್ರೊ . ಬಿ . ಕೆ . ಚಂದ್ರಶೇಖರ್ ಅವರೊಂದಿಗೆ ಸಮಲೋಚಿಸಿ ಸಾಲು ಮರದ ತಿಮ್ಮ ಅವರಿಗೆ ಮೈಸೂರಿಗೆ ಕರೆತಂದು ಒಂದೇ ದಿನದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವಂತೆ ಮಾಡಿದೆ . ಶಾಲೆ , ಆಸ್ಪತ್ರೆ , ರಸ್ತೆಗಳು , ಪಾರ್ಕ್ಗಳು ಮೊದಲಾದ ಕಡೆಗಳಲ್ಲಿ ಒಂದೇ ಒಂದು ದಿನ ಲಕ್ಷ ಗಿಡ ನೆಡುವಂತೆ ನೋಡಿಕೊಂಡರು . ಅದೇ ರೀತಿ ಜಿಪಂ ಅಧ್ಯಕ್ಷನಾಗಿದ್ದಾಗ ಮೈಸೂರಿನಿಂದ ಕುಶಾಲನಗರ , ಕೆ . ಆರ್ . ನಗರ , ಹುಣಸೂರಿನಿಂದ ಹನಗೋಡು ತನಕ ಮರಗಳನ್ನು ನೆಡುವಂತೆ ದೊಡ್ಡದಾಗಿ ಬೆಳೆದು ಬೈಕ್ ನಲ್ಲಿ ಹೋಗುವವರಿಗೆ ಆನಂದ ಕೊಡಲಿದೆ ಎಂದು ಸಂತಸ ಹೊಂದಿದೆ .
ನಗರದ ರಿಂಗ್ ರಸ್ತೆಯಲ್ಲಿ ಬೆಳೆದಿರುವ ಬೇವಿನ ಮರಗಳು ಇಂದು ನೆರಳುಮತ್ತು ತೇವಾಂಶವನ್ನು ಕೊಡುತ್ತದೆ . ಕುಟುಂಬ ನೆಮ್ಮದಿಯಿಂದ ಇದ್ದಾರೆ . ಸಾಮಾಜಿಕವಾಗಿ ಮಾಡಿರುವ ಕೆಲಸಗಳು ಖುಷಿ ತಂದುಕೊಡಲಿದೆ . ಮರಗಳು ನಮ್ಮ ಆರೋಗ್ಯ , ರಕ್ಷಣೆ ಮಾಡುತ್ತವೆ ಎಂದು ಹೇಳಿದರು . ಇಂದು ನದಿಗಳು ಕಲ್ಮಶಗೊಳ್ಳುತ್ತಿದೆ . ನಾವು ಶುದ್ಧ ನೀರು ಕುಡಿಯುವುದಾಗಿ ಹೇಳಿದರೂ ಕಲುಷಿತ ನೀರು ಸೇವನೆ ಮಾಡುವುದಾಗಿದೆ . ಬೆಂಗಳೂರಿನಲ್ಲಿ ಕೆಆರ್ ಎಸ್ತೀರ್ಥ ನೀರು ಕುಡಿಯುತ್ತಿದ್ದರೂ ಲಕ್ಷ್ಮಣ ನದಿಯ ಕಲುಷಿತ ಅಂಶಗಳು ಪರಿಣಾಮ ಬೀರುತ್ತಿದೆ . ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದೇನೆ . ದಿಗಳಿಗೆ ವಿಷಕಾರಕ ವಸ್ತುಗಳು ಸೇರದಂತೆ ನೋಡಿಕೊಳ್ಳಬೇಕು . ಪರಿಸರದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿ . ಮೈಸೂರು ನಗರಪಾಲಿಕೆಯಂತೆ ನಗರಸಭೆ , ಪಟ್ಟಣ ಪಂಚಾಯಿತಿಗಳಲ್ಲಿ ಹಸಿಕಸ – ಒಣಕಸ ಬೇರ್ಪಡಿಸಿ ಕಾಪಾಡಬೇಕು . ಹುಟ್ಟಿದ ಮೇಲೆ ಸಮಾಜಕ್ಕೆ ಸಾರ್ಥಕವಾದ ಕೆಲಸಗಳನ್ನು ಮಾಡಬೇಕು . ಮನೆಗಳನ್ನು ಒಂದು ಮರ ನೆಟ್ಟು , ಮತ್ತೊಂದು ಮರವನ್ನು ನೆಡುವಂತೆ ಪ್ರೇರೇಪಿಸಬೇಕು .
ಆಟೋಮ್ಯಾಟಿವ್ ಆಕ್ಸಲ್ ಸಂಸ್ಥೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೂರ್ಗಳ್ಳಿ ಕೆರೆ ಅಭಿವೃದ್ದಿ ಮಾಡುತ್ತಿದೆ ಶ್ಲಾಘನೀಯವಾಗಿದೆ . ಕಂಪನಿಯಲ್ಲಿ ಯಾವುದೇ ದೂರುಗಳು , ವಿಚಾರಗಳು ಬಾರದಂತೆ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ . ಕಾರ್ಮಿಕರ ಹಿತದ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವುದರಿಂದ ಒಳ್ಳೆಯದಾಗಲಿದೆ ಎಂದು ಹೇಳಿದರು .
ನನ್ನ ಮನಸ್ಸಿಗೆ ತಯಂಬಾ ನೋವಾಗಿತ್ತು . ಇಲ್ಲ , ಅಭಿವೃದ್ದಿ ದೃಷ್ಟಿಯಿಂದ ಏನಾದರೂ ಮಾಡಬೇಕೆಂಬ ಕಾರಣದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಒಂದೇ ಕ್ಷೇತ್ರದ ಯೋಜನೆ ಒಂದು ನಗರಸಭೆ , ನಾಲ್ಕುಪಟ್ಟಣ ಪಂಚಾಯಿತಿ ರಚನೆಯಾಗುವಂತೆ ಮಾಡಿದೆ ಎಂದು ಹೇಳಿದರು . ಚಾಮುಂಡೇಶ್ವರಿ ಕ್ಷೇತ್ರ ದೊಡ್ಡದು . ಮೈಸೂರು ನಗರದ ಸುತ್ತಲೂ ನಲವತ್ತು ಕಿ . ಮೀ ಪಸರಿಸಿಕೊಂಡು ಬೆಳೆದಿದೆ .
ನಗರಸಭೆ , ಪಟ್ಟಣ ಪಂಚಾಯಿತಿಗಳನ್ನಾಗಿ ಮಾಡಲು ಐಎಎಸ್ ಅಧಿಕಾರಿಗಳು ಬಳಿ ರಾತ್ರಿ ಎರಡು ಗಂಟೆಯವರೆಗೆ ಕಾದು ಕುಳಿತುಕೊಳ್ಳುತ್ತಿದ್ದರು . ಇಂದು ಅಭಿವೃದ್ದಿ ಕೆಲಸ ಸುಗಮವಾಗಿ ನಡೆಯುತ್ತಿದೆ ಎಂದು ನುಡಿದರು . ಮುಡಾದಲ್ಲಿ ಖಾತೆ , ಕಟ್ಟಡ , ನಕ್ಷೆ ಅನುಮೋದನೆ , ಯೋಜನೆ ಅನುಮೋದನೆ ಮಡುತ್ತಿದ್ದರೂ ಸರ್ಕಾರ ಹೊರಡಿಸಿದ ಒಂದು ಆದೇಶದಿಂದ ಆರು ವರ್ಷಗಳಿಂದ ಒಂದೇ ಒಂದು ಬಡಾವಣೆಗೆ ರಸ್ತೆ ಮಾಡಲು ಸಾಧ್ಯವಾಗಲಿಲ್ಲ . ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 300 ಕೋಟಿ ರೂ . ಮಂಜೂರು ಮಾಡಿಸಿ ಒಂದೇ ಬಾರಿಗೆ ಕಾಮಗಾರಿ ಮಾಡಲು ಕ್ರಮ ಕೈಗೊಂಡಿದ್ದರಿ ಎ ದ ರಸ್ತೆಗಳ ನಿರ್ಮಾಣಕ್ಕೆ ಕಾರಣವಾಯಿತು .
ಈ ಸಂದರ್ಭದಲ್ಲಿ ಆಟೋಮೋಟಿವ್ ಆಕ್ಸಲ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಮುರುಳಿ ಕೃಷ್ಣ , ನಾಗರಾಜು ಗರ್ಗೇಶ್ವರಿ , ರಂಗನಾಥ್ , ಮನ್ಮಥ್ , ಕೂರ್ಗಳ್ಳಿ ಪೌರಾಯುಕ್ತ ಎಚ್ . ಬಿ . ಚಂದ್ರಶೇಖರ್ , ಆರ್ ಎಫ್ ಒಗಳಾದ ಸುಂದರ್ , ಸ್ವಾಮಿ , ಮುಖಂಡರಾದ ಅಭಿಜ್ಞಾ , ನಂಜು ಎ ಡೇಗೌಡ , ಸತೀಶ್ , ರಾಮು , ಕುಮಾರ್ , ಮಲ್ಲೇಶ್ , ವಾಸು , ಚಂದ್ರಶೇಖರ್ , ಮೂರ್ತಿ , ಮೈದನಹಳ್ಳಿ ಚಂದ್ರಶೇಖರ್ , ಪರಿಸರ ತಜ್ಞ ಮನೋಜ್ ಪಾಟೀಲ್ , ಪರಿಸರ ಇಂಜಿನಿಯರ್ ಗಿರಿಜಾ ಯೋಜನೆಗೆ ಚಾಲನೆ ನೀಡಿದರು . ಕೆರೆಯನ್ನು ಅಭಿವೃದ್ದಿಪಡಿಸುವ ಜೊತೆಗೆ ಗಿಡಗಳನ್ನು ನೆಟ್ಟು ಸುಂದರ ತಾಣವನ್ನಾಗಿ ಮಾಡುವ ಹೊಣೆಯನ್ನು ಆಟೋಮೋಟಿವ್ ಆಕ್ಸಲ್ ಲಿಮಿಟೆಡ್ ಹೊಣೆ ಹೊತ್ತಿದೆ .