Tuesday, February 17, 2026
Google search engine

Homeರಾಜ್ಯಮಂಡ್ಯ: ಬೆಂ-ಮೈ ಹೆದ್ದಾರಿ ತಡೆದು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮಂಡ್ಯ: ಬೆಂ-ಮೈ ಹೆದ್ದಾರಿ ತಡೆದು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಸುಪ್ರೀಂ ಆದೇಶದ ವಿರುದ್ಧ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬೆಂ-ಮೈ ಹೆದ್ದಾರಿ ತಡೆದು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದೆ.

ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಇದ್ದರು ತಮಿಳುನಾಡಿನ ಪರ ತೀರ್ಪು ಕೊಡ್ತಿದೆ. ವಸ್ತುಸ್ಥಿತಿಯನ್ನ ಮೊದಲು ನೋಡಬೇಕು ಬಳಿಕ ಆದೇಶ ನೀಡಬೇಕು. ಕಾವೇರಿ ನದಿ ನೀರು ಹಂಚಿಕೆಯ ಸಂಬಂಧ ಕೇಂದ್ರ ಮಧ್ಯಪ್ರವೇಶ ಮಾಡಬೇಕು. ಕೂಡಲೇ ಕೇಂದ್ರ ಸರ್ಕಾರ CWMA ತಜ್ಞರ ಕಳಿಸಿ ಪರಿಶೀಲನೆ ನಡೆಸಬೇಕು‌ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಳಿಕ ಡಿಸಿ ಮೂಲಕ ಪ್ರಧಾನ ಮಂತ್ರಿ ಗೆ ಮನವಿ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular