ಜೆಡಿಎಸ್ ನಾಯಕರು -ಕೈ ಶಾಸಕ ಕದಲೂರು ಉದಯ್ ನಡುವೆ ವಾಕ್ಸಮರ
ಮಂಡ್ಯ: ಜೆಡಿಎಸ್ ನಾಯಕರು ಮತ್ತು ಕೈ ಶಾಸಕ ಕದಲೂರು ಉದಯ್ ನಡುವೆ ಗಂಡಸ್ತನದ ಗುದ್ದಾಟ ಜೋರಾಗಿದೆ.
ಮಂಡ್ಯ ಜೆಡಿಎಸ್ ನಲ್ಲಿ ಯಾರು ಗಂಡಸರು ಇಲ್ವಾ ಎಂದಿದ್ದ ಶಾಸಕ ಉದಯ್ ಹೇಳಿಕೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕೌಂಟರ್ ಕೊಟ್ಟಿದ್ದು, ಉದಯ್ ಶ್ರೀಲಂಕಾ, ಗೋವಾದಲ್ಲಿ ಗಂಡಸ್ತನ ಕಳೆದುಕೊಂಡಿರಬೇಕು ಎಂದಿದ್ದಾರೆ.
ನಾನು ರವೀಂದ್ರ ಶ್ರೀಕಂಠಯ್ಯ ಮನೆಯಲ್ಲೇ ಗಂಡಸ್ತನ ಕಳೆದುಕೊಂಡಿದ್ದೇನೆ ಎಂದು ಖಾರವಾಗಿ ಉದಯ್ ಪ್ರತಿಕ್ರಿಯಿಸಿದ್ದಾರೆ.
ಇದೀಗ ಉದಯ್ ವಿರುದ್ಧ ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ. ಉದಯ್ ವಿರುದ್ಧ ಮಾಜಿ ಸಚಿವ ಪುಟ್ಟರಾಜು, ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದು, ಉದಯ್ ಮಂಡ್ಯದ ಹಿರಿಮೆಯನ್ನು ಕಳೆಯುವ ಹೇಳಿಕೆ ಕೊಡ್ತಾ ಇದ್ದಾರೆ. ಸುಸಂಸ್ಕೃತ ಕುಟುಂಬದಿಂದ ಬಂದ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಉದಯ್ ನಾಲಿಗೆ ಹರಿಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ತಲೆ ತಗ್ಗಿಸುವ ಹೇಳಿಕೆ ಇದು. ಉದಯ್ ಎಷ್ಟರ ಮಟ್ಟಿಗೆ ಅಕ್ಕ-ತಂಗಿಯರ ಜೊತೆ ಹುಟ್ಟಿದ್ದಾರೆ. ರಾಜಕೀಯ ಮಾಡುತ್ತೇವೆ ಎಂದು ಹೆಂಡತಿ ಮಕ್ಕಳನ್ನು ಬೀದಿಗೆ ತರಬಾರದು ಎಂದಿದ್ದಾರೆ.
ಗಂಡಸ್ತನ ಮಾತನ್ನು ಮೊದಲು ಹೇಳಿದ್ದು ಉದಯ್. ಇದೀಗ ಅವಾಚ್ಯವಾಗಿ ಅವರು ಮಾತಾಡಿದ್ದಾರೆ. ಕಾಂಗ್ರೆಸ್ ಅವರು ಉದಯ್ ನ್ನು ಹದ್ದುಬಸ್ತಲ್ಲಿ ಇಟ್ಟುಕೊಳ್ಳಲಿಲ್ಲ ಅಂದರೆ ಮಂಡ್ಯದಲ್ಲಿ ಆಗುವ ಅನಾಹುತಗಳಿಗೆ ಅವರೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಶಬ್ಧ ಬಳಕೆಗೆಗೂ ಮುನ್ನ ನಾವು ಅರ್ಥ ಮಾಡಿಕೊಂಡು ಮಾತಾಡುತ್ತೇವೆ. ಕುಟುಂಬದವರು ಅಮಾಯಕರು ಇರುತ್ತಾರೆ. ಅಧಿಕಾರ, ಹಣದ ಮದದಿಂದ ಅವಹೇಳನಕಾರಿಯ ಮಾತು ಖಂಡನೀಯ. ಗಂಡಸ್ತನದ ಮಾತು ಹೇಳಿದ ಮೇಲೆ ಟೀಕೆ ಟಿಪ್ಪಣಿ ಎದುರಿಸಬೇಕು. ರವೀಂದ್ರ ಶ್ರೀಕಂಠಯ್ಯ ಕುಟುಂಬದ ಲೈವ್ ಬ್ಯಾಂಡ್ ನಡೆಸಿಲ್ಲ. ಉದಯ್ ಹೇಳಿಕೆ ನೋಡಿ ಅವರ ಹೆಂಡತಿ ಇನ್ನೂ ಮನೆಯಲ್ಲಿ ಇಟ್ಟುಕೊಂಡಿದ್ದಾರಾ? ನಿನಗೆ ಅಷ್ಟೊಂದು ಗಂಡಸ್ತನ ಇದ್ಯಾ ಬಾ ನೋಡೋಣಾ. ಮನೆವರೆಗೆ ಬೇಡಾ, ಬೀದಿವರೆಗೆ ಬಾ ಗಂಡಸ್ತನ ಏನು ಅಂತಾ ತೋರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.