ಮಂಡ್ಯ: 2013ರ ಪ್ರಕರಣ ಸಂಬಂಧ ನಿನ್ನೆ ಕೋರ್ಟ್ ಗೆ ಹಾಜರಾಗಿ ಇಂದು ಮಂಡ್ಯಕ್ಕೆ ಆಗಮಿಸಿದ ಶಾಸಕ ರವಿಕುಮಾರ್ ಅವರನ್ನು ಒಕ್ಕಲಿಗ ಸಂಘಟನೆಗಳು ಬೃಹತ್ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದರು.
ಒಕ್ಕಲಿಗರ ಒಗ್ಗಟ್ಟಿನ ಸ್ವಾಭಿಮಾನಿ ಬೈಕ್ ರ್ಯಾಲಿ ನಡೆಸಿದ್ದು, ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು. ಉಮ್ಮಡಹಳ್ಳಿ ಗೇಟ್ ಬಳಿಯ ಅಮರಾವತಿ ಹೋಟೆಲ್ ಬಳಿಯಿಂದ ರವಿಕುಮಾರ್ ಮನೆಯವರೆಗೆ ರ್ಯಾಲಿ ನಡೆಸಿದರು. ರ್ಯಾಲಿ ಉದ್ದಕ್ಕೂ ಶಾಸಕ ಗಣಿಗ ರವಿಕುಮಾರ್ ಪರ ಹಾಗೂ ಒಕ್ಕಲಿಗರ ನಾಯಕ ದೇವೇಗೌಡರ ಪರ ನಿಂತ ರವಿಕುಮಾರ್ ಎಂದು ಘೋಷಣೆ ಕೂಗಲಾಯಿತು.

ದೇವೇಗೌಡರ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದು, ಚುನಾವಣೆ ಹೊತ್ತಿನಲ್ಲಿ ಒಕ್ಕಲಿಗರ ಮತ ಸೆಳೆಯಲು ಪ್ಲಾನ್ ಮಾಡಲಾಗಿದೆ.
ಮಂಡ್ಯದಲ್ಲಿ ಎಚ್ ಡಿ ದೇವೇಗೌಡ ಹೆಸರು ಬಳಸಿ ಒಕ್ಕಲಿಗರ ಮತಬುಟ್ಟಿಗೆ ಕೈ ಹಾಕಿದ್ದಾರೆ. ದೇವೇಗೌಡರ ಪರ ನಿಂತು ಕೇಸು ಹಾಕಿಸಿಕೊಂಡಿದ್ದನ್ನೇ ಕೈ ಶಾಸಕ ಬಂಡವಾಳ ಮಾಡಿಕೊಂಡಿದ್ದು, ಆ ಮೂಲಕ ಕಾಂಗ್ರೆಸ್ ಒಕ್ಕಲಿಗರ ಪರ ನಿಂತಿದೆ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ.