ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮೈಸೂರು ಜಿಲ್ಲಾ ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷರಾಗಿ ಕೆ.ಆರ್.ನಗರ ತಾಲೂಕಿನ ಬಸವರಾಜ ಪುರ ಗ್ರಾಮದ ಎಂ ಡಿ ದ್ರಾಕ್ಷಾಯಿಣಿ ವೆಂಕಟೇಶ್ ಅವರನ್ನು ನೇಮಿಸಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರು ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಅವರ ಶಿಫಾರಸ್ಸಿನ ಮೇರೆಗೆ ಇವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ ಈ ಅಧಿಕೃತ ಅದೇಶ ಹೊರಡಿಸಿದ್ದಾರೆ. ಮಂಗಳವಾರ ಕೆ.ಆರ್.ನಗರದ ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಸಮನ್ವಯ ಸಭೆಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ದ್ರಾಕ್ಷಾಯಿಣಿ ವೆಂಕಟೇಶ್ ಅವರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಶುಭಕೋರಿದರು.
ನಂತರ ನೂತನ ಅಧ್ಯಕ್ಷೆ ಎಂ. ಡಿ .ದ್ರಾಕ್ಷಾಯಿಣಿ ವೆಂಕಟೇಶ್ ಅವರನ್ನು ತಾಲೂಕು ಮಹಿಳಾ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಜೆಡಿಎಸ್ ಮುಖಂಡರುಗಳಾದ ಮೋಹನ್ ಕುಮಾರಿ, ಭಾಗ್ಯಮ್ಮ, ಬೇಬಿ ಮಹೇಶ್ , ವಂದನಾ, ಗೀತಾದೇವು ರವರು ರವರು ಅಭಿನಂಧಿಸಿದರು